ಅನ್ನಭಾಗ್ಯ ಯೋಜನೆಗೆ ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರ: ಸಚಿವ ಕೆ.ಹೆಚ್ ಮುನಿಯಪ್ಪ | JANATA NEWS
ನವದೆಹಲಿ : ಕೇಂದ್ರದ ಬಳಿ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿಯ ದಾಸ್ತಾನು ಇದ್ದರೂ ಅದನ್ನು ಬೇರೆ ಯೋಜನೆಗೆ ಉಪಯೋಗಿಸಲು ಅಗತ್ಯವಾಗಿದೆ ಆದ್ದರಿಂದ ಕರ್ನಾಟಕಕ್ಕೆ ಅಕ್ಕಿಯನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪಿಯೂಶ್ ಗೊಯಲ್ ಹೇಳಿದ್ದಾರೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ, ಇಂದು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿದೆ. ಅವರು ಅಕ್ಕಿ ಕೊಡುವುದಕ್ಕೆ ಆಗುವುದಿಲ್ಲ ಅಂತ ಹೇಳಿದ್ದಾರೆ. ನಿಮ್ಮ ಬಳಿ ಸ್ಟಾಕ್ ಇದೆ. ದ್ವಿಗುಣ ಪ್ರಮಾಣದಲ್ಲಿ ಇದೆ. ಏಕೆ ಅಕ್ಕಿ ಕೊಡುವುದಿಲ್ಲ ಎಂದು ಕೇಳಿದೆ. ಕೇಂದ್ರದ ದರ ನೀಡಲೂ ನಾವು ರೆಡಿ ಇದ್ದೀವಿ ಅಂತಾನೂ ಹೇಳಿದೆ. ಆದರೆ, ಬೇರೆ ಬೇರೆ ಕಾರ್ಯಕ್ರಮಕ್ಕೆ ನೀಡಲು ಬೇಕಾಗುತ್ತದೆ ಎಂದು ಅಕ್ಕಿ ಕೊಡಲು ನಿರಾಕರಿಸಿದರು ಎಂದು ಮುನಿಯಪ್ಪ ತಿಳಿಸಿದರು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅಕ್ಕಿ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಹೆಚ್ಚುವರಿ ಅಕ್ಕಿ ಪೂರೈಸಲು ಸಾಧ್ಯವಿಲ್ಲ ಎಂದಿದ್ದಾರೆ. ನಾವು ಹಣ ಕೊಡುತ್ತೇವೆ ಅಕ್ಕಿ ಪೂರೈಸಿ ಎಂದು ಕೋರಿದ್ದೇವೆ. ಆದ್ರೇ ಕೇಂದ್ರ ಆಹಾರ ಸಚಿವ ಪಿಯೂಸ್ ಗೋಯಲ್ ಮಾತ್ರ ಆಗಲ್ಲ ಎಂದಿದ್ದಾರೆ ಎಂದರು.
ರಾಜ್ಯದ ಜನರಿಗೆ ನಾವು 10 ಕೆಜಿ ಅಕ್ಕಿ ಕೊಡುವುದಾಗಿ ಗ್ಯಾರಂಟಿಯ ಭರವಸೆ ನೀಡಿದ್ದೇವೆ. ಎಷ್ಟೇ ಕಷ್ಟವಾದರೂ ಉಚಿತ ಅಕ್ಕಿ ಕೊಟ್ಟೇ ಕೊಡುತ್ತೇವೆ. ಜನರಿಗೆ ನಾವು ನೀಡಿರುವಂತ ಭರಸೆಯಂತೆ ಅಕ್ಕಿ ನೀಡೇ ನೀಡುತ್ತೀವಿ ಎಂಬುದಾಗಿ ತಿಳಿಸಿದರು.
ರಾಜ್ಯಕ್ಕೆ ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ರಾಜಕಾರಣ ಕಾಣಿಸುತ್ತಿದೆ. ಎಫ್ ಸಿಐ ಅಧಿಕಾರಿಗಳು ನೀಡಿದ ಪತ್ರ ಕೂಡ ಕೊಟ್ಟೆ. ಯುಪಿಎ ಅವಧಿಯಲ್ಲಿ ಆಹಾರ ಭದ್ರತೆ ಕಾಯ್ದೆ ತಂದಿದೆ. ನಾನು ಬಹಳ ಆಶಾಭವನೆಯಿಂದನೆ ಬಂದೆ. ಆದರೆ ಅಕ್ಕಿ ಇಲ್ಲವೆಂದರು. ಇದರ ಹಿಂದೆ ರಾಜಕೀಯ ಉದ್ದೇಶ ಇದೆ. ನಾವು ನಮ್ಮ ಪ್ಲಾನ್ ಮಾಡಿದ್ದೇವೆ. ಕೇಂದ್ರದ ಏಜೆನ್ಸಿಗಳಿಂದ ಈ ಹಿಂದೆ ಖರೀದಿ ಮಾಡಿದ್ದೇವೆ. ಈಗ ಅದೇ ರೀತಿ ಮಾಡುತ್ತಿದ್ದೇವೆ. ಎಷ್ಟೇ ಸ್ಟಾಕ್ ಇದ್ದರೂ ನಮಗೆ ಬೇರೆ ಬೇರೆ ಕಾರ್ಯಕ್ರಮಗಳಿಗೆ ಬೇಕು ಅಂಥ ಹಾರಿಕೆ ಉತ್ತರ ಕೊಟ್ಟಿದ್ದಾರೆ ಎಂದು ಸಚಿವ ಮುನಿಯಪ್ಪ ಆಕ್ರೋಶ ಹೊರಹಾಕಿದರು.
ಇಂದು ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವರಾದ Piyush Goyal ರವರನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯದ ಅನ್ನಭಾಗ್ಯ ಯೋಜನೆಯ ಕುರಿತು ವಿವರಿಸಲಾಯಿತು, ಹಠಾತ್ತನೆ ಭಾರತ ಒಕ್ಕೂಟ ವ್ಯವಸ್ತೆಯ ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯನ್ನ (OMSS) ಸ್ಥಗಿತ ಗೊಳಿಸಿದ್ದರಿಂದ ಬಡವರಿಗೆ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಅನುಷ್ಠಾನಕ್ಕೆ ಭಾರಿ ಹೊಡೆತ ಬೀಳಲಿದೆ ಹಾಗೂ ಈ ಹಿಂದೆ ಇದ್ದ ಯೋಜನೆಯನ್ನು ಮುಂದುವರೆಸಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು ನಮ್ಮ ಸರ್ಕಾರ ಹಣವನ್ನು ನೀಡಲು ತಯಾರಿದ್ದು ನಮಗೆ ಅಕ್ಕಿಯನ್ನು ನೀಡಬೇಕೆಂದು ಮನವಿ ಮಾಡಲಾಯಿತು.
ಆದರೆ ಕೇಂದ್ರ ಸಚಿವರು 300 ಲಕ್ಷ ಟನ್ ಅಕ್ಕಿಯನ್ನು ಇತರೆ ವಿವಿಧ ಯೋಜನೆಗಳಿಗೆ ಮೀಸಲಿಡಲಾಗಿದೆ, ಆದ್ದರಿಂದ ರಾಜ್ಯಕ್ಕೆ ಅಕ್ಕಿ ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿರುತ್ತಾರೆ.ಆದರೆ ರಾಜ್ಯ ಸರ್ಕಾರವು ಅನ್ನಭಾಗ್ಯದ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತದೆ ಎಂದು ಕೆ ಎಚ್ ಮುನಿಯಪ್ಪ ರವರು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ಅವರು ಈ ನಿಲುವು ಬಡವರ ವಿರೋಧಿಯಾಗಿದೆ ಹಾಗೂ ರಾಜಕೀಯ ಪ್ರೇರಿತವಾಗಿದೆ ಎಂದು ಖಂಡಿಸುತ್ತೇನೆ.ಎಷ್ಟೇ ಅಡೆ ತಡೆಗಳಾದರು ನಾವು ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.