ಮಗನಿಗೆ ಪೆಟ್ರೋಲ್ ಹಾಕಿ ಬೆಂಕಿ ಇಟ್ಟು ಕೊಲೆಗೈದ ತಂದೆ! | JANATA NEWS
ದೊಡ್ಡಬಳ್ಳಾಪುರ : ಮಗನಿಗೆ ಪೆಟ್ರೋಲ್ ಹಾಕಿ ಬೆಂಕಿ ಇಟ್ಟು ತಂದೆಯೇ ಕೊಲೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಆದರ್ಶ್ (28) ಎಂದು ಗುರುತಿಸಲಾಗಿದೆ. ಈತನನ್ನು ತಂದೆ ಜಯರಾಮಯ್ಯ(58) ಕೊಲೆ ಮಾಡಿದ್ದಾನೆ. ಆದರ್ಶ್ ದಿನನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು.
ಇತ್ತೀಚೆಗೆ ತಾಯಿಯ ಬಳಿ ಕುಡಿಯಲು ಹಣ ಕೇಳಿದ್ದನಂತೆ. ಹಣ ನೀಡಿಲ್ಲ ಎಂದಿದ್ದ ತಾಯಿಗೆ ಮಗ ಮನಬಂದಂತೆ ಥಳಿಸಿದ್ದನಂತೆ.
ಇದರಿಂದ ಬೇಸತ್ತಿರುವ ತಂದೆ, ಮಗನನ್ನೇ ಕೊಲೆ ಮಾಡಿದ್ದಾರೆ. ಬಾರ್ ಬಳಿ ಮಗನಿಗೆ ತಂದೆ ಹೊಡೆದಿದ್ದಾನೆ. ಈ ವೇಳೆ ಆದರ್ಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಮಗನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.