ಅತ್ತಿಗೆಯನ್ನು ಬೈದಿದ್ದಕ್ಕೆ ಮೈದುನನ ಗಲಾಟೆ, ರಾಜಿ ಸಂಧಾನದ ವೇಳೆ ಕೊಲೆ! | JANATA NEWS
ಬೆಂಗಳೂರು : ಅತ್ತಿಗೆಯನ್ನು ಬೈದಿದ್ದಕ್ಕೆ ಮೈದುನನ ಗಲಾಟೆ, ರಾಜಿ ಸಂಧಾನದ ವೇಳೆ ಕೊಲೆ ನಡೆದಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಭೀಕರ ಕೊಲೆ ಆಗಿದೆ.
ಸೋದರ ಸಂಬಂಧಿ ಫಾರುಕ್ ಎಂಬಾತ ಅಕ್ರಂ ಪಾಷಾ ಹಾಗು ಆತನ ಪತ್ನಿ ಬಗ್ಗೆ ಅವಹೇಳನ ಮಾಡಿದ್ದನಂತೆ. ಈ ಬಗ್ಗೆ ರಿಯಾಜ್ ಎಂಬಾತನ ಬಳಿಕ ಸಂಧಾನಕ್ಕೆ ಹೋದಾಗ ಅಕ್ರಂ ಪಾಷಾ ತಮ್ಮನ ಕೊಲೆ ನಡೆದಿದೆ.
ಗ್ಯಾರೇಜ್ನಲ್ಲಿ ಕೆಲಸ ಮಾಡುವ ಅಕ್ರಂ ಪಾಷಾ, ತನ್ನ ಚಿಕ್ಕಪ್ಪನ ಮಗ ಫಾರೂಕ್ ಜೊತೆ ಜಗಳ ಮಾಡಿಕೊಂಡಿದ್ದ. ಮಾವ ರಿಯಾಜ್ ಬಳಿ ಸಂಧಾನಕ್ಕೆ ಹೋಗುವಾಗ ಅಕ್ರಂ ಪಾಷ ಜೊತೆಗೆ ಸೋನು ಪಾಷಾ ಕೂಡ ತೆರಳಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಫಾರೂಕ್ ಕಬ್ಬಿಣದ ರಾಡ್ನಿಂದ ಸೋನುಪಾಷಾ ಹತ್ಯೆ ಮಾಡಿದ್ದಾರೆ.
ಪರಿಣಾಮ ಒಂದೇ ಏಟಿಗೆ ನೆಲಕ್ಕೆ ಬಿದ್ದಿದ್ದ ಸೋನುವನ್ನು ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋನು ಸಾವನ್ನಪ್ಪಿದ್ದಾನೆ. ಮಾಗಡಿ ರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಕೊಲೆ ಆರೋಪಿ ಫಾರೂಕ್ನನ್ನ ಬಂಧಿಸಿದ್ದಾರೆ.