ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಆರೋಪಿ ಬಂಧನ, ಮನೆ ಧ್ವಂಸ : ಸಂತ್ರಸ್ತನ ಪಾದಪೂಜೆ ಮಾಡಿದ ಮ.ಪ್ರ. ಸಿಎಂ | JANATA NEWS
ಭೋಪಾಲ್ : ದಶಮತ್ ರಾವತ್ ಎಂಬ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ, ವೀಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇಂಥ ಅಮಾನವೀಯ ಕೃತ್ಯವೆಸಗಿದ ಆರೋಪಿ ಪ್ರವೇಶ್ ಶುಕ್ಲಾ ಬಿಜೆಪಿ ಕಾರ್ಯಕರ್ತ ಎಂದು ಹೇಳಲಾಗಿದ್ದು, ಈತನನ್ನು ಈಗಾಗಲೇ ಮಧ್ಯಪ್ರದೇಶ ರಾಜ್ಯದ ಪೊಲೀಸರು ಬಂಧಿಸಿದ್ದಾರೆ. ಇದಲ್ಲದೇ, ರಾಜ್ಯ ಬಿಜೆಪಿ ಸರ್ಕಾರದ ಆದೇಶದ ಮೇರೆಗೆ ಈತನ ಅಕ್ರಮ ಮನೆಗಳನ್ನೂ ಸಹ ಧ್ವಂಸಗೊಳಿಸಲಾಗಿದೆ, ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ರಾವತ್ ಅವರ ಪಾದ ಪೂಜೆಯನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಡಿದ್ದು, ಶಾಲು ಹೊದಿಸಿ ಸನ್ಮಾನ ಮಾಡಿರುವ, ಫೋಟೋಗಳು ವೈರಲ್ ಆಗುತ್ತಿದ್ದು, ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
English summary : Accused of urinating on a person arrested, house destroyed: MP worshiped the victim feet. CM