ಮುನಿಗಳಿಗೆ ಸರ್ಕಾರದಿಂದ ಸರಿಯಾದ ರಕ್ಷಣೆ ಸಿಗಬೇಕು - ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ | JANATA NEWS
ಧರ್ಮಸ್ಥಳ : ಬೆಳಗಾವಿಯಲ್ಲಿ ಜೈನಮುನಿಗಳ ಭೀಕರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ತುಂಬಾ ದುಃಖದಿಂದ, ಈ ರೀತಿಯ ಇನ್ನೊಮ್ಮೆ ಆಗಲೇಬಾರದು, ಮುನಿಗಳಿಗೆ ಸರ್ಕಾರದಿಂದ ಸರಿಯಾದ ರಕ್ಷಣೆ ಸಿಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜೈನಮುನಿಗಳ ಭೀಕರ ಹತ್ಯೆ ವಿಚಾರ ಕುರಿತು ಮಾತನಾಡಿರುವ ಧರ್ಮಾಧಿಕಾರಿಗಳು, ಬೆಳಗಾವಿಯ ಚಿಕ್ಕೋಡಿಯ ಬಳಿ ಪೂಜ್ಯ ಶ್ರೀ ಕಾಮಕುಮಾರ ಮಹಾರಾಜರ ಹತ್ಯೆಯಾಗಿದೆ ಎಂದು ಇಂದು ತಿಳಿಯಿತು. ಈ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಏಕೆಂದರೆ ತ್ಯಾಗಿಗಳು ವಿಶೇಷವಾಗಿ ದಿಗಂಬರ ಮುನಿಗಳ ಈ ರೀತಿಯ ಹತ್ಯೆ ಇತಿಹಾಸದಲ್ಲಿಯೇ ಪ್ರಥಮ ಇರಬೇಕು. ಕೃತ್ಯ ಎಸಗಿದವರ ಬಂಧನ ಆಗಿರೋದು ತಿಳಿದುಬಂದಿದೆ. ಇದಕ್ಕಾಗಿ ಪೊಲೀಸರರಿಗೆ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ತಪ್ಪಿದಸ್ಥರಿಗೆ ತಕ್ಷ ಶಿಕ್ಷೆಯಾಗಬೇಕು. ತುಂಬಾ ದುಃಖದಿಂದ, ಈ ರೀತಿಯ ಇನ್ನೊಮ್ಮೆ ಆಗಲೇಬಾರದು, ಮುನಿಗಳಿಗೆ ಸರ್ಕಾರದಿಂದ ಸರಿಯಾದ ರಕ್ಷಣೆ ಸಿಗಬೇಕು, ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಕೇಳಿಕೊಂಡಿದ್ದಾರೆ.