ಪತ್ನಿ ಕೊಲೆ ಮಾಡಿ ಅತ್ತೆಗೆ ಕರೆ ಮಾಡಿದ ಅಳಿಯ | JANATA NEWS
ಬೆಂಗಳೂರು : ಅಕ್ರಮ ಸಂಬಂಧ ಅನುಮಾನ ಹೊಂದಿದ್ದ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೂಡಲಪಾಳ್ಯ ಸಮೀಪದ ಶಿವಾನಂದನಗರದ ಗೀತಾ (33) ಮೃತ ಮಹಿಳೆ. ಈ ಸಂಬಂಧ ಮೃತಳ ಪತಿ ಶಂಕರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದ ಬಳಿಕ ನಿಮ್ಮ ಮಗಳನ್ನು ಮರ್ಡರ್ ಮಾಡಿರುವೆ ಅಂತ ಕೊಲೆಯಾದ ಗೀತಾಳ ತಾಯಿಗೆ ಕರೆ ಮಾಡಿ ಶಂಕರ್ ಮಾಹಿತಿ ನೀಡಿದ್ದ ಎನ್ನಲಾಗಿದೆ.
13 ವರ್ಷಗಳ ಹಿಂದೆ ತಮಿಳುನಾಡಿನ ಹೊಸೂರು ಮೂಲದ ಗೀತಾ ಮತ್ತು ಶಂಕರ್ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶಿವಾನಂದನಗರದಲ್ಲಿ ಶಂಕರ್ ಕುಟುಂಬ ನೆಲೆಸಿತ್ತು. ಕೆಲ ದಿನಗಳಿಂದ ಪರಪರುಷನ ಜತೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕರ್ ಅನುಮಾನ ಹೊಂದಿದ್ದ. ಇದೆ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು.
ರಾತ್ರಿ ಗೀತಾಳನ್ನು ಕೊಲೆ ಮಾಡಿದ ಪತಿ, ಅತ್ತೆಗೆ ಕರೆ ಮಾಡಿ ವಿಷಯ ತಿಳಿಸಿದ್ದ. ವಾಪಸ್ ತಾಯಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶಂಕರ್ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ವಿಡಿಯೋಗಳು ಕೂಡ ಇದ್ದು, ನನ್ನ ಮಾನಮಾರ್ಯದೆ ಹಾಳಾಗುತ್ತಿದ್ದ ಹಿನ್ನಲೆಯಲ್ಲಿ ಈ ಕೆಲಸ ಮಾಡಿರುವೆ ಅಂತ ಹೇಳಿದ್ದ ಎನ್ನಲಾಗಿದೆ.
ರತ್ನಮ್ಮ ಕೊಟ್ಟ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ