ಸಿದ್ದರಾಮಯ್ಯ ಅವರೇ, ಭ್ರಷ್ಟಾಚಾರ ರಹಿತ ಆಡಳಿತ ಕೊಡುವ ಮೂಲಕ ನಿಮ್ಮ ತಾಕತ್ ಪ್ರದರ್ಶಿಸಿ: ಅಶ್ವಥ್ ನಾರಾಯಣ್ | JANATA NEWS
ಬೆಂಗಳೂರು : ಭ್ರಷ್ಟಾಚಾರ ರಹಿತ ಆಡಳಿತ ಕೊಡುವ ಮೂಲಕ ನಿಮ್ಮ ತಾಕತ್ ಪ್ರದರ್ಶಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ ಅಶ್ವಥ್ ನಾರಾಯಣ್ ಸವಾಲು ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಸವಾಲ್ ಹಾಕಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ನಿಮಗೆ ಯಾರು ವಿದ್ಯಾವಂತರು ಆಗಬಾರದು. ಅವಿದ್ಯಾವಂತರು ಅಸಹಾಯಕರು ಆಗಿರಬೇಕು. ಉತ್ತಮ ಗುಣಮಟ್ಟದ ಶಿಕ್ಷಣ ಯಾವ ರೀತಿ ಕೊಡಬೇಕು ಎಂಬುದು ಗೊತ್ತಿದೆಯೇ? ಭ್ರಷ್ಟಾಚಾರ ರಹಿತ ಆಡಳಿತ ಕೊಡುವ ಮೂಲಕ ನಿಮ್ಮ ತಾಕತ್ ಪ್ರದರ್ಶಿಸಿ. ಬರೀ ವರ್ಗಾವಣೆಗೆ ಎಲ್ಲಾ ಪೇಮೆಂಟ್ ಪೇಮೆಂಟ್.. ಪೇಮೆಂಟ್' ಎಂದು ಹೇಳುವ ಮುಖೇನ ಸಿಎಂ ಸಿದ್ದರಾಮಯ್ಯ ಅವರಿಗೆ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.
ಅನ್ ಕಂಡೀಷನ್ ಆಗಿ ಭಾಗ್ಯ ಘೋಷಣೆ ಮಾಡಿದ್ರಿ, ಷರತ್ತು ಇಲ್ಲದೇ ಯೋಜನೆಗಳನ್ನು ಜಾರಿಗೆ ತರುತ್ತೀರಿ ಎಂದು ಹೇಳಿದ್ರಿ. ಈಗ ಮಾತು ಉಳಿಸಿಕೊಳ್ಳದೇ ಗ್ಯಾರಂಟಿ ಯೋಜನೆಗಳನ್ನು ನಾಡಿಗೆ ಕೊಟ್ಟಿದ್ದಾರೆ ಎಂದರು.
ಗ್ಯಾರಂಟಿ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮೋದಿ ಅವರಿಗೆ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಲಭಿಸಬೇಕು. ಬಡವರು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಿದ್ದರಾಮಯ್ಯ ಅವರೇ, ನಿಮಗೆ ಬಹಳ ವರ್ಷದ ಅನುಭವವಿದೆ ಅಲ್ವಾ? ಕೌಶಲ್ಯತೆ ಹಾಗೂ ಉತ್ತಮ ಶಿಕ್ಷಣ ಕೊಡುವ ತಾಕತ್ತಿದ್ದರೆ, ನಿಮ್ಮ ಕಾಳಜಿ ಹಾಗೂ ಅನುಭವವನ್ನು ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ತೋರಿಸಿ ಎಂದು ಹೇಳಿದರು.