ಮರದಿಂದ ಬಿದ್ದು ಬಿಜೆಪಿ ಮಾಜಿ ಶಾಸಕನ ಗನ್ಮ್ಯಾನ್ ಸಾವು | JANATA NEWS
ಕೊಡಗು : ಮರದಿಂದ ಕೆಳಗೆ ಬಿದ್ದು ಬಿಜೆಪಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಗನ್ಮ್ಯಾನ್ / ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.
ಮೃತ ಪೊಲೀಸ್ ಸಿಬ್ಬಂದಿಯನ್ನು ಲೋಕೇಶ್ (40) ಎಂದು ಗುರುತಿಸಲಾಗಿದೆ. ಇವರು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಗನ್ ಮ್ಯಾನ್ ಆಗಿದ್ದು, 15 ವರ್ಷಗಳಿಗೂ ಹೆಚ್ಚು ಕಾಲ ಅವರ ಬಳಿ ಕೆಲಸ ಮಾಡಿದ್ದರು.
ಗ್ರಾಮದ ತೋಟದಲ್ಲಿ ಮರದ ಕೆಲಸ ಮಾಡುವ ವೇಳೆ ಲೋ ಬಿಪಿಯಾಗಿ ಮರದಿಂದ ಬಿದ್ದು ಮೃತಪಟ್ಟಿದ್ದಾರೆ. ತಕ್ಷಣವೇ ಇವರನ್ನು ಮಡಿಕೇರಿ ಆಸ್ಪತ್ರೆಗೆ ರವಾನಿಸಿದರೂ ಮಾರ್ಗಮಧ್ಯೆ ಲೋಕೇಶ್ ಕೊನೆಯಿಸಿರೆಳೆದಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :Former BJP MLA gunman dies after falling from tree