ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆ | JANATA NEWS
ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಶವ ಪತ್ತೆ ಆಗಿದೆ.
ಬ್ಯಾಟರಾಯನದೊಡ್ಡಿ ನಿವಾಸಿ ಮುನಿರತ್ನಮ್ಮ(38) ಶವವಾಗಿ ಪತ್ತೆಯಾಗಿರುವ ಮಹಿಳೆ.
ನಿನ್ನೆ ತಂಗಿ ಮಗನನ್ನು ವಾಕಿಂಗಗೆ ಕರೆದುಕೊಂಡು ಹೋಗಿದ್ದ ಮಹಿಳೆ ರಾತ್ರಿಯಾದರು ಮನೆಗೆ ಬಾರದ ಇದ್ದಾಗ ಕುಟುಂಬಸ್ಥರು ಈ ವೇಳೆ ಮಹಿಳೆಯನ್ನು ಹುಡುಕಾಡಿದ್ದಾರೆ.
ರಾತ್ರಿ ಭೂತಾನಹಳ್ಳಿಯ ನಿರ್ಜನ ಪ್ರದೇಶದಲ್ಲಿ ಬಾಲಕ ಪತ್ತೆಯಾಗಿದ್ದು, ಬಾಲಕನಿಗೆ ಕೈ ಕಾಲು ಹಾಗು ತಲೆಗೆ ಗಂಭೀರ ಗಾಯವಾಗಿದೆ.
ಬಾಲಕ ಸಿಕ್ಕ ಜಾಗದ ಸಮೀಪದ ನಿರ್ಜನ ಪ್ರದೇಶದಲ್ಲಿ ಮಹಿಳೆ ಶವ ಕೂಡ ಪತ್ತೆ ಆಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
English summary :A body was found suspiciously in a deserted area