ಪ್ರಿಯತಮೆಯನ್ನ ಕುಕ್ಕರ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಪ್ರಿಯಕರ | JANATA NEWS
ಬೆಂಗಳೂರು : ಪ್ರಿಯತಮೆಯನ್ನ ಕುಕ್ಕರ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಬೇಗೂರಿನ ನ್ಯೂ ಮೈಕೋ ಲೇಔಟ್ನಲ್ಲಿ ನಡೆದಿದೆ.
ಮೃತ ಯುವತಿಯನ್ನು 24 ವರ್ಷದ ದೇವಾ ಎಂದು ಗುರುತಿಸಲಾಗಿದೆ. ಯುವಕನನ್ನು 24 ವರ್ಷದ ವೈಷ್ಣವ್, ಪ್ರಿಯಕರ ಕೊಲ್ಲಂ ಮೂಲದವನು ಎಂದು ತಿಳಿದುಬಂದಿದೆ.
ಕೇರಳ ಮೂಲದ ದೇವಾ, ವೈಷ್ಣವ್ ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಇಬ್ಬರು ಬೆಂಗಳೂರಿಗೆ ಬಂದು ಸಹಜೀವನ ನಡೆಸುತ್ತಿದ್ದರು.
ಕಳೆದ ರಾತ್ರಿ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಆರೋಪಿ ಕುಕ್ಕರ್ ನಿಂದ ಅನ್ನ ಖಾಲಿ ಮಾಡಿ, ತಟ್ಟೆಯಲ್ಲಿ ಹಾಕಿ ನಂತ್ರ ಆ ಕುಕ್ಕರ್ ತೆಗೆದುಕೊಂಡು ಮಲಗುವ ಕೋಣೆಯಲ್ಲಿದ್ದ ದೇವಾಗೆ ಹೊಡೆದಿದ್ದಾನೆ. ಹೊಡೆತದಿಂದ ಬಲವಾಗಿ ಗಾಯಗೊಂಡಿದ್ದ ದೇವಾ, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.