ನಾಳೆ ಶುಕ್ರವಾರ ಕರ್ನಾಟಕ ಬಂದ್ : ಕಾವೇರಿ ನೀರಿಗಾಗಿ ಕಾವೇರಿದ ಚಳುವಳಿ | JANATA NEWS
ಬೆಂಗಳೂರು : ಕಾವೇರಿ ನದಿ ನೀರಿಗಾಗಿ ಮೊನ್ನೆ ನಡೆದ ಬೆಂಗಳೂರು ಬಂದ್ ಯಶಸ್ವಿಯಾದ ಬೆನ್ನಲ್ಲೇ ನಾಳೆ ಶುಕ್ರವಾರ ನದಿ ನೀರಿಗಾಗಿ ಕನ್ನಡ ಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಗೆ ಇಡೀ ರಾಜ್ಯ ಸಜ್ಜಾಗುತ್ತಿದೆ. ಬಂದ್ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಾಗುವ ಸಾಧ್ಯತೆಗಳಿವೆ.
ಬಂದ್ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯಕ್ಕೆ ಇಂದು ಮಧ್ಯರಾತ್ರಿಯಿಂದಲೇ ಬಸ್ ಸಂಚಾರವನ್ನು ಸ್ತಬ್ಧಗೊಳಿಸುವ ಲಕ್ಷಣಗಳು ಕಂಡು ಬಂದಿದೆ. ಬನ್ ಸಂದರ್ಭದಲ್ಲಿ ಅವಶ್ಯಕ ಪೂರೈಕೆಗಳಾದ ಔಷಧ ಹಾಗೂ ಹಾಲು, ಮಾರಾಟಗಳಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎನ್ನಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಇರುವ ಬಹುತೇಕ ಐಟಿ ಕಂಪನಿಗಳು ಬೆಂಗಳೂರು ಬಂದ್ ಸಂದರ್ಭದಲ್ಲಿ ಪಾಲಿಸಿದಂತೆ ಶುಕ್ರವಾರವು ಕೂಡ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ನೀಡಿದ್ದು ಐಟಿ ಕಂಪನಿಗಳ ಸಂಕೀರ್ಣಗಳು ಸಂಪೂರ್ಣ ಬಂದ್ ಆಗಿರಲಿದೆ
ಇನ್ನೂ ಕರ್ನಾಟಕ ಬಂದ್ ವೇಳೆಯಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಬಸ್ ಆಟೋ ಟ್ಯಾಕ್ಸಿ ಮಾಲ್ಗಳು ಹೋಟೆಲ್ ಗಳು ಅಂಗಡಿಗಳು ಬಂದ್ ಆಗಲಿದೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದ್ದು ಶುಕ್ರವಾರ ಎಲ್ಲಾ ಸಿನಿಮಾ ಮಂದಿರಗಳು ಸೇರಿದಂತೆ ಚಲನಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣಗಳು ಸಂಪೂರ್ಣ ಬಂದ್ ಆಗಿರಲಿದೆ