ಉತ್ತರಖಂಡ್ ಪಾರ್ವತಿ ಕುಂಡದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ: 4000 ಕೋಟಿ ಯೋಜನೆಗೆ ಚಾಲನೆ | JANATA NEWS
ನವದೆಹಲಿ : ಹಲವು ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಮಟ್ಟಿಗೆ ಉತ್ತರಾಖಂಡ್ಗೆ ಭೇಟಿ ನೀಡಿದ್ದು, ಅದರ ಪೂರ್ವಭಾವಿಯಾಗಿ ಪಿಥೋರಗಢದ ಪಾರ್ವತಿ ಕುಂಡ್ನಲ್ಲಿ ಪ್ರಧಾನಿ ಪ್ರಾರ್ಥನೆ ಸಲ್ಲಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಉತ್ತರಾಖಂಡದ ಎಂಟು ಕ್ರೀಡಾಪಟುಗಳು ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಿದ್ದಾರೆ ಅಂದು ತಿಳಿಸಿ ಅವರನ್ನು ಅಭಿನಂದಿಸಿದ್ದಾರೆ.
ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದರು. "ವರ್ಷಗಳಿಂದ ತಡೆಹಿಡಿಯಲ್ಪಟ್ಟ ಕೆಲಸ, ಎಲ್ಲರ ಆಶೀರ್ವಾದದಿಂದಾಗಿ, ನಿಮ್ಮ ಮಗ ಅದನ್ನು ಮಾಡಲು ಸಾಧ್ಯವಾಯಿತು ... ಇಂದು, ಭಾರತವು ಯಶಸ್ಸು ಮತ್ತು ಅಭಿವೃದ್ಧಿಯ ಹೊಸ ಎತ್ತರವನ್ನು ಸಾಧಿಸುತ್ತಿದೆ" ಎಂದು ಅವರು ಹೇಳಿದರು.
"ಇದು ಉತ್ತರಾಖಂಡದ ದಶಕ ಎಂದು ನಾನು ನಂಬುತ್ತೇನೆ ... ಉತ್ತರಾಖಂಡವು ಅಭಿವೃದ್ಧಿಯ ಹೊಸ ನಿರೀಕ್ಷೆಗಳನ್ನು ತಲುಪುತ್ತದೆ ಮತ್ತು ನಮ್ಮ ಸರ್ಕಾರವು ಆ ಒಂದು ಉದ್ದೇಶದಿಂದ ಕೆಲಸ ಮಾಡುತ್ತಿದೆ ... 4,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ಮಾಡಲಾಯಿತು ..." ಎಂದು ಅವರು ಹೇಳಿದರು.