ನಕ್ಸಲೀಯರ ಬಾಂಬ್ ದಾಳಿಗೆ ಕರ್ನಾಟಕದ ಇಬ್ಬರು ಬಿಎಸ್ಎಫ್ ಯೋದರು ಹುತಾತ್ಮ | Janata news
ಕಾರವಾರ : ನಿನ್ನೆ ಛತ್ತೀಸಗಢ ಕಂಕರ್ ನಲ್ಲಿ ನಕ್ಸಲೀಯರು ನಡೆಸಿದ ಅಮಾನುಷ ಕೃತ್ಯದಲ್ಲಿ ಕರ್ನಾಟಕದ ಇಬ್ಬರು ಬಿಎಸ್ಎಫ್ ಯೋದರು ಹುತಾತ್ಮರಾಗಿದ್ದಾರೆ. ಇಲ್ಲಿಯ ಕಂಕರದಲ್ಲಿ ನಕ್ಸಲರು ಬಿಎಸ್ಎಫ್ ಯೋದರ ಮೇಲೆ ನಡೆಸಿದ ಐ.ಇ.ಡಿ. ಬಾಂಬ್ ಸ್ಫೋಟ ದಾಳಿಯಲ್ಲಿ ಈ ಇಬ್ಬರು ಯೋಧರು ಗಾಯಗೊಂಡಿದ್ದರು. ಇಬ್ಬರೂ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಲಾಯಿತಾದರೂ, ಅಷ್ಟರೊಳಗೆ ಇಬ್ಬರೂ ಸಾವಿಗಿಡಾಗಿದ್ದಾರೆ.
ಟಾಡ್ಬಾಲಿ ಗ್ರಾಮದ ಅರಣ್ಯದಲ್ಲಿ ನಿನ್ನೆ ಸಂಜೆ 5 ಗಂಟೆಗೆ ಬಿಎಸ್ಎಫ್ನ 121 ಬೆಟಾಲಿಯನ್ನ ಯೋಧರ ತಂಡ ಮಣ್ಣಿನ ಕಚ್ಚಾ ರಸ್ತೆಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ನೆಲದಲ್ಲಿ ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಐ.ಇ.ಡಿ. ಬಳಸಿ ನಕ್ಸಲರು ಬೈಕ್ ಸ್ಫೋಟಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಯೋಧರನ್ನು ಅರಣ್ಯದಿಂದ ಹೊರಗೆ ಕರೆದೊಯ್ಯುವಷ್ಟರಲ್ಲಿ ಸಾವಿಗೀಡಾಗಿದ್ದಾರೆ, ಎನ್ನಲಾಗಿದೆ.
ಹುತಾತ್ಮ ಯೋದರಲ್ಲಿ ಇಬ್ಬರೂ ಕರ್ನಾಟಕದವರಾಗಿದ್ದು, ಒಬ್ಬರು ಸಂತೋಷ್ ಲಕ್ಷ್ಮಣ್ ನಾಯ್ಕ ಮತ್ತು ವಿಜಯಾನಂದ ಸುರೇಶ ನಾಯ್ಕ ಎಂದು ತಿಳಿದುಬಂದಿದೆ. ಹುತಾತ್ಮ ಯೋದ ವಿಜಯಾನಂದ ಸುರೇಶ ನಾಯ್ಕ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೊಡಿಬಾಗದ ಕೋಮಾರಪಂತವಾಡಾಡ ನಿವಾಸಿ ಎಂದು ಹೇಳಲಾಗಿದೆ. ವಿಜಯಾನಂದ ಸುರೇಶ ನಾಯ್ಕ ಸೇನೆಗೆ ಸೇರಿ 2 ವರ್ಷವಾಗಿತ್ತು. ಮನೆಯವರಿಗೆ ಈ ವಿಷಯವನ್ನು ಇಂದು ತಿಲಿಸಿಲಾಗಿದ್ದು, ಸಂಜೆ ವೇಳೆಗೆ ದೇಹವು ಕಾರವಾರ ತಲುಪಲಿದೆ ಎನ್ನಲಾಗಿದೆ.
ಸ್ಪೋಟ ನಡೆದ ಸ್ಥಳಕ್ಕೆ ತಕ್ಷಣವೇ ಹೆಚ್ಚಿನ ಭದ್ರತಾ ಪಡೆಗಳು ಧಾವಿಸಿದ್ದು, ದಾಳಿಯಲ್ಲಿ ಭಾಗಿಯಾದ ನಕ್ಸಲರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ, ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೂಚನೆ : ಮೇಲಿನ ಮಾಹಿತಿಗಳನ್ನು ನಮ್ಮ ಅನುಮೋದನೆ ಇಲ್ಲದೆ ಕಾಪಿ ಮಾಡುವುದು ಅಥವಾ ಮರುಪ್ರಕಟಣೆ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು, ಬೆಂಗಳೂರು ಕೋರ್ಟನಲ್ಲಿ ತಕ್ಕ ಕಾನೂನು ಕ್ರಮ ಕೈಗೊಳ್ಳಲಾಗುವುದು.