ಮತ್ತೊಮ್ಮೆ ಬಂತು ನಾಗರಹಾವು ! | Janata news
ಬೆಂಗಳೂರು : ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ 1972ರಲ್ಲಿ ನಿರ್ಮಾಣವಾದ ಬಿಗ್ ಬಜೆಟ್ ಸಿನಿಮಾ ಹಾಗೂ ವಿಷ್ಣುವಧನ್ ಅಭಿನಯದಲ್ಲಿ ಮೂಡಿ ಬಂದಿದ್ದ ಎವರ್ ಗ್ರೀನ್ ಸಿನಿಮಾ ನಾಗರಹಾವು, ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರಿಗೆ ಚಿತ್ರರಂಗದಲ್ಲಿ ಬಂಗಾರದ ಭವಿಷ್ಯ ಬರೆದ ಚಿತ್ರ ಈಗ ಮತ್ತೆ ತೆರೆಯ ಮೇಲೆ ಅಬ್ಬರಿಸುತ್ತಿದೆ.
45 ವರ್ಷದ ಹಿಂದಿನ ಸಿನಿಮಾ ಆದರೂ ಅದರಲ್ಲಿ ಬರುವ ಕಾಲೇಜು ಹುಡುಗನ ಒರಟುತನ, ಪ್ರೀತಿ, ಮೇಷ್ಟ್ರು ಮತ್ತು ವಿದ್ಯಾರ್ಥಿಗಳಿಗೆ ಇರುವ ಸಂಬಂಧ ಇವತ್ತಿನ ಕಾಲೇಜು ಹುಡುಗರಿಗೆ ಕ್ರೆಜ್ ಹುಟ್ಟುವಂತಹದಿದೆ. ಸುಮಧುರವಾದ ಹಾಡುಗಳಿಗೆ ಇಂದು ಮೈಮರೆಯುತ್ತಾರೆ ಸಿನಿರಸಿಕರು. 45 ವರ್ಷದ ಹಿಂದಿನ ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆಯಾಗ್ತಿರೋದು ಒಂದು ಸ್ಪೆಷಲ್ ಆದ್ರೆ, ಸ್ಯಾಂಡಲ್ ವುಡ್ ಸ್ಟಾರ್ ಗಳು ಚಿತ್ರವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿರುವುದು ವಿಶೇಷ.
ರಾಜ್ಯದ ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಇಂದು ಸಿನಿಮಾ ಬಿಡುಗಡೆಯಾಗಿದೆ, ಕೆಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಶುರು ಆಗಿದೆ. ನಾಗರಹಾವು ಸಿನಿಮಾವನ್ನು ವೀರಸ್ವಾಮಿ ಅವರು ನಿರ್ಮಾಣ ಮಾಡಿದ್ದು, ಅವರ ಪುತ್ರರಾದ ರವಿಚಂದ್ರನ್ ಹಾಗೂ ಬಾಲಾಜಿ ಚಿತ್ರವನ್ನು ಮತ್ತೆ ರಿಲೀಸ್ ಮಾಡುತ್ತಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಈ ಚಿತ್ರ ಒಂದು ಅದ್ಬುತ. ಆ ಅದ್ಬುತ ಸೃಷ್ಟಿ ಹಾಗು ಮತ್ತೆ ವಿಷ್ಣುವರ್ಧನ್ರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಸೂಚನೆ : ಮೇಲಿನ ಮಾಹಿತಿಗಳನ್ನು ನಮ್ಮ ಅನುಮೋದನೆ ಇಲ್ಲದೆ ಕಾಪಿ ಮಾಡುವುದು ಅಥವಾ ಮರುಪ್ರಕಟಣೆ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು, ಬೆಂಗಳೂರು ಕೋರ್ಟನಲ್ಲಿ ತಕ್ಕ ಕಾನೂನು ಕ್ರಮ ಕೈಗೊಳ್ಳಲಾಗುವುದು.