ಪತಿಯಿಂದ ಸರಗಳ್ಳತನ ಮಾಡಿಸುತ್ತಿದ್ದ ಪತ್ನಿ: ಪತಿಗೆ ಗುಂಡೇಟು ಬಿಳ್ತಿದ್ದಂತೆ ಪತ್ನಿ ಎಸ್ಕೇಪ್ | Janata news
ಬೆಂಗಳೂರು : ಕುಖ್ಯಾತ ಚೈನ್ ಸ್ನ್ಯಾಚರ್ ಅಚ್ಯುತ್ಕುಮಾರ್ ಪತ್ನಿಗಾಗಿ ಪೊಲೀಸರು ಮೂರು ತಿಂಗಳಿನಿಂದ ವ್ಯಾಪಕ ಶೋಧ ಕೈಗೊಂಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ಈತನ ಪತ್ನಿ ತಲೆಮರೆಸಿಕೊಂಡು ಓಡಾಡುತ್ತಿದ್ದು, ಈಕೆಗಾಗಿ ಶೋಧ ಮುಂದುವರೆದಿದೆ.
ಮಹಾದೇವಿ ಐಷಾರಾಮಿ ಜೀವನಕ್ಕಾಗಿ ಮೊದಲ ಪತಿಗೆ ಕೈಕೊಟ್ಟು ಅಚ್ಯುತ್ ಕುಮಾರ್ ನನ್ನು ಮದುವೆಯಾಗಿದ್ದಳಂತೆ, ಮೂರು ತಿಂಗಳ ಹಿಂದೆ ಆತನನ್ನು ಹಿಡಿಯಲು ಹೋದಾಗ ಕಾನ್ಸ್ಟೇಬಲ್ಗೆ ಇರಿದು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದನು, ನೈಸ್ ರೋಡ್ ಬಳಿ ಆರೋಪಿ ಅಚ್ಯುತ್ ಕಾಲಿಗೆ ಗುಂಡು ಹಾರಿಸಿ ಆತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಹೊರವಲಯದ ಕಣ್ಮಿಣಿಕೆಯಲ್ಲಿನ ಈತನ ಮನೆಯನ್ನು ಶೋಧಿಸಿದಾಗ ಪತ್ನಿ ಮಹಾದೇವಿ ಪರಾರಿಯಾಗಿದ್ದಳು.
ಸರಗಳ್ಳ ಅಚ್ಯುತ್ ಕುಮಾರ್ನಿಂದ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಸರಗಳ್ಳತನ ಮಾಡಿದ್ದನು. ಅಚ್ಯುತ್ ಕುಮಾರ್ ವಿರುದ್ಧ ಸುಮಾರು ಬೆಂಗಳೂರಿನಲ್ಲಿ 70 ಸರಗಳ್ಳತನ ಕೇಸ್ ಹಾಗು ಇತರ ಜಿಲ್ಲೆಗಳಲ್ಲಿ ಒಟ್ಟು150 ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಈತನ ಪತ್ನಿ ತಲೆಮರೆಸಿಕೊಂಡಿದ್ದು, ಈಕೆಗಾಗಿ ಶೋಧ ಮುಂದುವರೆದಿದೆ.