ನ್ಯಾಯಾಲಯಕ್ಕೆ ಬಂದ ಆರೋಪಿ ಪೊಲೀಸರ ಕಣ್ತಪ್ಪಿಸಿ ಪರಾರಿ | Janata news
ಮಂಗಳೂರು : ಕುಖ್ಯಾತ ಆರೋಪಿಯೊಬ್ಬ ಸುಳ್ಯ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಪೊಲೀಸರೊಂದಿಗೆ ಹಾಜರಾಗಿ ವಾಪಾಸು ತೆರಳುವ ವೇಳೆ ಪೋಲೀಸರ ಕೈಯಿಂದ ತಪ್ಪಿಸಿಕೊಂಡ ಘಟನೆ ಶುಕ್ರವಾರ ಸುಳ್ಯದಲ್ಲಿ ನಡೆದಿದೆ.
ಅಬ್ದುಲ್ ಅಜೀಜ್ (40) ಎಂಬಾತ ಸುಳ್ಯದ ಅಜ್ಜಾವರ ನಿವಾಸಿಯಾಗಿದ್ದು, ಕಳ್ಳತನ ಹಾಗೂ ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ, ಈತನನ್ನು ಕೇರಳದ ಕಾಞಂಗಾಡ್ ಸಬ್ ಜೈಲಿನಲ್ಲಿ ಇರಿಸಲಾಗಿತ್ತು. ಸುಳ್ಯದ ಪ್ರಕರಣ ಸಂಬಂಧ ಸುಳ್ಯದ ನ್ಯಾಯಾಲಯಕ್ಕೆ ಕರೆತಂದ ಸಂದರ್ಭದಲ್ಲಿ ಆತನನ್ನು ವಿಚಾರಣೆ ಬಳಿಕ ಪುನಃ ಕೊಂಡೊಯ್ಯುವ ವೇಳೆ ಈತ ಸುಳ್ಯ ಬಸ್ ನಿಲ್ದಾಣದ ಶೌಚಾಲಯಕ್ಕೆಂದು ತೆರಳಿದ್ದು ಅಲ್ಲಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
English summary : The accused came to court and escaped from the police