ನನ್ ಅತ್ಯಾಚಾರ ಪ್ರಕರಣ : ಇವತ್ತಾದರೂ ಆರೋಪಿ ಬಿಷಪ್ ಬಂಧನವಾಗುತ್ತಾ? | Janata news
ಕೊಟ್ಟಾಯಂ : ಅತ್ಯಾಚಾರದ ಆರೋಪಿ ರೋಮನ್ ಕ್ಯಾತೊಲಿಕ್ ಚರ್ಚ ನ ಬಿಷಪ್ ನನ್ನು ಬಂಧಿಸುವಂತೆ ಒತ್ತಾಯಿಸಿ ಅತ್ಯಾಚಾರಕ್ಕೊಳಗಾದ ನನ್ ಗಳು ಪ್ರತಿಭಟನೆ ನಡೆಸಿ ವಾರಗಳೇ ಕಳೆದು, ದೇಶಾದ್ಯಂತ ಚರ್ಚೆಗೆ ಒಳಗಾದರೂ ಇನ್ನೂ ಆರೋಪಿಯನ್ನು ಬಂಧಿಸಲು ಕೇರಳ ಪೊಲೀಸರು ದೈರ್ಯ ತೋರಿದಂತೆ ಕಂಡುಬಂದಿಲ್ಲ. ಈ ಬಗ್ಗೆ ಹೇಳಿಕೆ ನೀಡಿರುವ ಕೊಟ್ಟಾಯಂ ಎಸ್ಪಿ ಹರಿ ಶಂಕರ, ಆರೋಪಿ ಬಿಷಪ್ ಫ್ರಾಂಕೊ ಮುಲ್ಲಕ್ಕಲ್ ನನ್ನು ಇನ್ನೂ ಬಂಧಿಸಿಲ್ಲ, ಎಂದಿದ್ದಾರೆ.
ಪ್ರಕರಣದ ವಿಚಾರ ನಡೆದಿದ್ದು, ಇಂದು ರಾತ್ರಿ ಆರೋಪಿಯನ್ನು ಬಂಧಿಸಲಿದ್ದು, 24 ಗಂಟೆಯೊಳಗೆ ಕೋರ್ಟ್ ಮುಂದೆ ಹಾಜರಿ ಪಡಿಸಲಾಗುವುದು, ಎಂದು ಎಸ್ಪಿ ಹರಿ ಶಂಕರ ಎಏನ್ಐ ಗೆ ಹೇಳಿದ್ದಾರೆ. ಇದಕ್ಕೊ ಮೊದಲು ಕಳೆದ ಮೂರು ದಿನಗಳಿಂದ ಆರೋಪಿಯ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದು, ಆರೋಪಿ ಬಂಧನ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲು ಶಕ್ತವಾಗಿರಲಿಲ್ಲ.
ಅನ್ಯಧರ್ಮದ ಸ್ವಾಮಿಗಳ ಮೇಲೆ ಇಂತ ಆರೋಪ ಕೇಳಿಬಂದಾಗ ತಕ್ಷಣ ಕಾರ್ಯಪ್ರವೃತ್ತರಾಗಿ ಬಂಧಿಸುವ ಪೊಲೀಸರು ಈ ಪ್ರಕರಣದಲ್ಲಿ ದೈರ್ಯ ತೋರದೇ ಕಾಲಹರಣ ಮಾಡುತ್ತಿರುವುದು, ಸಾರ್ವಜನಿಕರ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
More details: ಅತ್ಯಾಚಾರದ ಆರೋಪಿ ಚರ್ಚ್ ಬಿಷಪ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ನನ್ ಗಳು | Janata news