ನನ್ ಅತ್ಯಾಚಾರ : ಆರೋಪಿ ಬಿಷಪ್14 ದಿನದ ನ್ಯಾಯಾಂಗ ಬಂಧನ; ಪ್ರತಿಭಟಿಸಿದ ನನ್ ಗಳು ಕರ್ತವ್ಯದಿಂದ ಹೊರಕ್ಕೆ | Janata news
ಕೊಟ್ಟಾಯಂ : ಕೇರಳದ ನನ್(ಕ್ರಿಶ್ಚಿಯನ್ ಸನ್ಯಾಸಿನಿ) ಅತ್ಯಾಚಾರ ಪ್ರಕರಣದ ಆರೋಪಿ ಬಿಶಪ್ ಫ್ರಾಂಕೊ ಮುಲಕ್ಕಲ್ ನನ್ನು ಅಕ್ಟೋಬರ್ 6 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಪಾಲಾ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಈ ಮಧ್ಯೆ, ಅತ್ಯಾಚಾರ ಸಂತ್ರಸ್ಥ ನನ್ ಗಳ ಜೊತೆ ಪ್ರತಿಭಟಿಸಿದ ನನ್ ಗಳನ್ನೂ ಕರ್ತವ್ಯದಿಂದ ಹೊರ ಹಾಕಲಾಗಿದೆ. ಈ ಶಿಸ್ತು ಕ್ರಮಕ್ಕೆ ಗುರಿಯಾದ ಕುರಿತು ಮಾತನಾಡಿದ ಸಿಸ್ಟರ್ ಲೂಸಿ ಕಲ್ಪುರಾ, ಕರ್ತವ್ಯದಿಂದ ನನ್ನನ್ನು ಹೊರಹಾಕುವ ಮೊದಲು, ನನ್ನ ತಪ್ಪು ಏನು ಎಂದು ವಿವರಿಸಿ, ಎಂದು ಚರ್ಚ್ ಆಡಳಿತವನ್ನು ಪ್ರಶ್ನಿಸಿದ್ದಾರೆ. ನನ್ನ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಇಲ್ಲಿಯವರೆಗೂ ನಾನು ತುಂಬಾ ಸಕ್ರಿಯನಾಗಿರುತ್ತೇನೆ. ಆದ್ದರಿಂದ, ನನ್ನನು ಏಕೆ ಹೊರಹಾಕಲಾಗಿದೆ ಎಂದು ಸ್ಪಷ್ಟಪಡಿಸಬೇಕಾಗಿದೆ, ಎಂದು ಫ್ರಾಂಕೊ ಮುಲಕ್ಕಲ್ ಅವರ ವಿರುದ್ಧ ಪ್ರತಿಭಟಿಸಿದ ಸನ್ಯಾಸಿ ಆಗ್ರಹಿಸಿದ್ದಾರೆ.
ಎಲ್ಲಾ ಪ್ರಮುಖ ಸಭೆಗಳೂ ಅತ್ಯಾಚಾರ ಸಂತ್ರಸ್ಥ ನನ್ ಗಳನ್ನು ಬೆಂಬಲಿಸುತ್ತಿಲ್ಲ. ಅವರು ತಮ್ಮ ಬಿಷಪ್ ಮತ್ತು ಪ್ರಿಸ್ಟ್ ರನ್ನು ರಕ್ಷಿಸಲು ಅವರು ಬಯಸುತ್ತಾರೆ ಹೊರತು, ತಮ್ಮ ಸ್ವಂತ ಸಿಸ್ಟರ್ ಗಳನ್ನಲ್ಲ. ನೀವು ಚರ್ಚ್ ನ ಮುಖವನ್ನು ಹಾಳು ಮಾಡುತ್ತಿದ್ದೀರಿ, ಎಂದು ಅವರು ಹೇಳುತ್ತಾರೆ, ಆದರೆ ಹಾಳು ಮಾಡುತ್ತಿರುವುದು ಬಿಷಪ್ ಮತ್ತು ಪ್ರಿಸ್ಟ್ ಗಳು, ಎಂದು ಅತ್ಯಾಚಾರ ಪ್ರಕರಣದಲ್ಲಿ ಬಿಶಪ್ ವಿರುದ್ಧ ಪ್ರತಿಭಟಿಸಿದ ಸಿಸ್ಟರ್ ಟೀನಾ ಹೇಳಿದ್ದಾರೆ.
ನನಗೆ ದುಃಖವಾಗುವ ಸಂಗತಿಯೆಂದರೆ, ಫ್ರಾಂಕೊ 13 ಬಾರಿ ಒಬ್ಬ ನನ್ ಳನ್ನು ಅತ್ಯಾಚಾರ ಮಾಡಿದಾಗ ಆ ಚರ್ಚ್ ಗೆ ತನ್ನ ಧ್ವನಿ ಎತ್ತಲು ಸಾಧ್ಯವಾಗಲಿಲ್ಲ. ನನಗನಿಸಿತು ನಾನು ಹೋಗಿ ಅವಳನ್ನು ಬೆಂಬಲಿಸಬೇಕೆಂದು. ನನ್ನ ಮೇಲೆ ಕ್ಷಿಪ್ರ ಕ್ರಮ ಕೈಗೊಳ್ಳಲಾಯಿತು, ಆದರೆ ಅತ್ಯಾಚಾರದ ಮೇಲೆ ಎಲ್ಲರೂ ಮೌನಧಾರಣೆ ಮಾಡಿದ್ದಾರೆ. ಈ ನಿರ್ಣಯವನ್ನು ಚರ್ಚ್ ನ ವಿಕರ್ಸ ತಂಡ ತೆಗೆದುಕೊಂಡಿರಬಹುದು, ಎಂದು ಸಿಸ್ಟರ್ ಲೂಸಿ ಕಲ್ಪುರ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಎಏನ್ಐ ಟ್ವೀಟ್ ಮಾಡಿದೆ.