ಕಾಂಗ್ರೆಸ್ ದೇಶದ ಹೊರಗೆ ಘಟಬಂಧನ ಮಾಡಲು ಹುಡುಕಾಟ ನಡೆಸಿದೆ : ಪ್ರಧಾನಿ ಮೋದಿ | Janata news
ಭೋಪಾಲ : ಕಾಂಗ್ರೆಸ್ ಪಕ್ಷ ದೇಶದಲ್ಲಿ ಘಟಬಂಧನ ಮಾಡಲು ಯಶಸ್ವಿ ಯಾಗುತ್ತಿಲ್ಲ ಅದಕ್ಕಾಗಿ, ದೇಶದ ಹೊರಗೆ ಘಟಬಂಧನ ಮಾಡಲು ಹುಡುಕಾಟ ನಡೆಸಿದೆ. ವಿಶ್ವದ ಯಾವದೋ ದೇಶ ಈಗ ನಿರ್ಣಯ ಮಾಡಲಿದೆಯೇ, ಭಾರತದ ಪ್ರಧಾನಿ ಯಾರಾಗಬೇಕೆಂದು? ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಖಾರವಾಗಿ ಪ್ರಶ್ನಿಸಿದರು. ಅವರು ಇಂದು ಭೋಪಾಲದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಮಹಾಕುಂಭ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಏನಾಗಿದೆ ನಿಮಗೆ? ಅಧಿಕಾರ ಕಳೆದಕೊಂಡ ನಂತರ ನಿಮ್ಮ ಸಮತೋಲನವನ್ನೂ ಕಳೆದುಕೊಂಡಿದ್ದಿರಾ? ಚುನಾವಣೆ ಬರುತ್ತದೆ ಹೋಗುತ್ತದೆ, 125 ವರ್ಷ ಹಳೆಯ ಪಕ್ಷದಲ್ಲಿ ಏನಾದರೂ ಉಳಿಯಬೇಕಲ್ಲ, ಆದರೆ ಏನೂ ಉಳಿದಿಲ್ಲ. ಈ ಕಾಂಗ್ರೆಸ್ ಪಕ್ಷ ಹೊರೆ ಯಾಗಿ ಬಿಟ್ಟಿದೆ. ಇಂತಹ ಜನರಿಂದ ದೇಶವನ್ನು ಉಳಿಸುವುದು, ಇದೂ ಪ್ರಜಾತಂತ್ರದಲ್ಲಿ ಜಾಗರೂಕ ನಾಗರಿಕರ ಕರ್ತವ್ಯವಾಗಿದೆ, ಎಂದರು.
ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ ಮೋದಿ, ನಾವು ಸಂಕಲ್ಪ ಮಾಡಿ ನಡೆಯಬೇಕು, ನಮ್ಮ ಬುದ್ಧಿ ಹಾಳಾಗಲು ಬಿಡಬಾರದು, ಸೋಲಲು ಕೊಡಬಾರದು, ಎಂದರು. ವಿರೋಧಿ ದಳದವರನ್ನು ಉದ್ದೇಶಿಸಿ, ಈಗಾಲಾದರೂ ತಿಳಿದುಕೊಳ್ಳಿ, ನಾನು ರಾಜಕೀಯಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ನನ್ನ ಮೇಲೆ ಕೆಟ್ಟ ಪದಗಳ ಪ್ರಯೋಗ ಮಾಡಲು ಪೂರ್ತಿ ಶಕ್ತಿ ಉಪಯೋಗ ಮಾಡುತ್ತಿದ್ದಿರಿ. ಇವರ ಶಬ್ದಕೋಶದಲ್ಲಿ ನನ್ನ ಮೇಲೆ ಉಪಯೋಗಿಸದೇ ಇರುವ ಯಾವುದೇ ಬೈಗುಳ ಪದಗಳಿಲ್ಲ. ನಿಮ್ಮ ಸಲಹೆಗಾರರನ್ನು ಕೇಳಿ, ನೀವು ನಮ್ಮ ಮೇಲೆ ಎಷ್ಟು ಕೆಸರು ಎರಚಿದ್ದಿರೋ ಅಷ್ಟೇ ಕಮಲ ಹೆಚ್ಚು ಚೆನ್ನಾಗಿ ಅರಳಿದೆ, ಎಂದು ಹೇಳಿದರು.