ರಮ್ಯಾ ವಿರುದ್ಧ ದೇಶದ್ರೋಹ ಪ್ರಕರಣ: ಎಫ್ಐಆರ್ ದಾಖಲು | Janata news
ನವದೆಹಲಿ : ಸದಾ ತಮ್ಮ ಟ್ವೀಟ್ ಮೂಲಕ ವಿವಾದಗಳನ್ನು ಹುಟ್ಟುಹಾಕುವ ಕಾಂಗ್ರೆಸ್ ಐಟಿ ಸೆಲ್ ನ ಮುಖ್ಯಸ್ಥೆ ದಿವ್ಯ ಸ್ಪಂದಾನ ಅಲಿಯಾಸ್ ರಮ್ಯಾ ವಿರುದ್ಧ ಉತ್ತರ ಪ್ರದೇಶದ ಗೋಮತಿನಗರ ಪೊಲೀಸ್ ಠಾಣೆಯಲ್ಲಿ ಇಂದು ಎಫ್ಐಆರ್ ದಾಖಲಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅವಹೇಳನ ಮಾಡಿರುವ ಛಾಯಾಚಿತ್ರ ಮತ್ತು ಟ್ವೀಟ್ ಮಾಡಿದಕ್ಕಾಗಿ ರಮ್ಯಾ(ದಿವ್ಯ ಸ್ಪಂದನ) ಸಾಕಷ್ಟು ಸುದ್ದಿ ಮಾಡಿದ್ದರು, ಹಾಗೆಯೇ ಈಗ ಸಂಕಷ್ಟ ಮೈಮೇಲೆ ಎಳೆದುಕೊಂಡಿದ್ದಾರೆ.
ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸೈಯದ್ ರಿಜ್ವಾನ್ ಅಹ್ಮದ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ದ ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯಿದೆ, ಸೆಕ್ಷನ್ 67 ಮತ್ತು 2008 ರ ಸೆಕ್ಷನ್ 124 ರ 9 ದೇಶದ್ರೋಹ) ಅಡಿಯಲ್ಲಿ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಧಾನಿ ನಮ್ಮ ಸಾರ್ವಭೌಮತ್ವ ಮತ್ತು ಗಣರಾಜ್ಯವನ್ನು ಪ್ರತಿನಿಧಿಸುತ್ತಾರೆ. ದಿವ್ಯ ಸ್ಪಂದನ ಟ್ವೀಟ್ ಅವಹೇಳನಕಾರಿಯಾಗಿದೆ. ಇದು ನಮ್ಮ ರಾಷ್ಟ್ರಕ್ಕೆ ಒಂದು ನಾಚಿಕೆಗೇಡು ಮತ್ತು ಒಂದು ತಿರಸ್ಕಾರವಾಗಿದೆ. ಸದ್ಯ ಎಫ್ಐಆರ್ ದಾಖಲಿಸಲಾಗಿದೆ, ಎಂದು ಸೈಯದ್ ರಿಜ್ವಾನ್ ಅಹ್ಮದ್ ಪ್ರಧಾನಿ ಮೋದಿ ಅವರ ವಿರುದ್ಧ ಟ್ವೀಟ್ ಮಾಡಿದ ಕಾಂಗ್ರೆಸ್ ನ ದಿವ್ಯ ಸ್ಪಂದನ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಸಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ನಟಿ ರಮ್ಯಾ ಎರಡೇ ಪದದಲ್ಲಿ ಓಹ್ ವೆಲ್ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ದೂರನ್ನು ರಮ್ಯಾ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಅವರ ಪ್ರತಿಕ್ರಿಯೆಯಿಂದ ತಿಳಿಯುತ್ತದೆ. ಇದು ನಿಮ್ಮ ಅಧಿಕೃತ ಹೇಳಿಕೆಯೇ ಎಂದು ಕಾರ್ಣಿಕಾ ಪ್ರಶ್ನಿಸಿದ್ದು, ಅದಕ್ಕೆ ರಮ್ಯಾ ಹೌದು ಎಂದು ಉತ್ತರಿಸಿದ್ದಾರೆ.
#ChorPMChupHai pic.twitter.com/Bahu5gmHbn
— Divya Spandana/Ramya (@divyaspandana) September 24, 2018