ಮಾರುತಿ ಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್: ಸಂಧಾನ ಯಶಸ್ವಿನಾ? | Janata news
ಬೆಂಗಳೂರು : ಇಂದು ದುನಿಯಾ ವಿಜಯ್ ಅವರ ಜಾಮೀನು ಅರ್ಜಿ ವಿಚಾರಣೆ ಬೆನ್ನಲ್ಲೇ ಡಿಸ್ಚಾರ್ಜ್ ಮಾಡಿದ್ದು, ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹಲ್ಲೆಯಾದ ಮಾರುತಿಗೌಡ ಆರು ದಿನಗಳ ಬಳಿಕ ವಿಕ್ರಮ್ ಆಸ್ಫತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ನಟ ದುನಿಯಾ ವಿಜಿಯಿಂದ ಹಲ್ಲೆಗೊಳಗಾದ ಜಿಮ್ ಟ್ರೈನರ್ ಮಾರುತಿ ಗೌಡ ಅವರಿಗೆ ಏನು ಮಾತೋಡ್ತಾನೂ ಆಗ್ತಾಇಲ್ಲ. ನಡೆಯೋದಕ್ಕೂ ಆಗ್ತಿಲ್ಲ. ಡಿಸ್ಚಾರ್ಜ್ ಮಾಡಿಸೋದರ ಹಿಂದೆ ಏನಾದರೂ ಸಂಧಾನದ ಸುಳಿವು ಇದೆಯಾ?
ದುನಿಯಾ ವಿಜಯ್ ಹಲ್ಲೆ ಹಿನ್ನೆಲೆ ತುಟಿಗೆ ಗಾಯವಾಗಿ ಕಣ್ಣು ಮತ್ತು ಮುಖ ಊತ ಬಂದಿತ್ತು ಈ ಹಿನ್ನೆಲೆ ಆರು ದಿನಗಳ ಕಾಲ ಚಿಕಿತ್ಸೆ ನೀಡಿ ತುಟಿಗೆ ಹದಿನೈದು ಹೊಲಿಗೆ ಹಾಕಲಾಗಿದೆ. ಆರು ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಮಾರುತಿ ಗೌಡ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದ ಹಿನ್ನೆಲೆ ನಿನ್ನೆ ಡಿಸ್ಚಾರ್ಜ್ ಮಾಡಲಾಗಿದೆ ಎನ್ನಲಾಗಿದೆ. ಎರಡು ದಿನಕ್ಕೊಮ್ಮೆ ಆಸ್ಪತ್ರೆಯ ಭೇಟಿ ನೀಡಿ ಆರೋಗ್ಯ ಪರಿಶೀಲನೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ ಅಂತೇ.
ಮಾರುತಿ ಗೌಡ ಆಸ್ಪತ್ರೆಯಲ್ಲಿದ್ದಾಗಲೇ ಸಂಧಾನಕ್ಕಾಗಿ ದುನಿಯಾ ವಿಜಿಯ ಮೊದಲನೇ ಹೆಂಡತಿ ನಾಗರತ್ನ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈಗಾಗಲೇ ಪಾನಿಪುರಿ ಕಿಟ್ಟಿ ಹಾಗೂ ವಿಜಿ ನಡುವೆ ನಾಗರತ್ನ ರಾಜಿ ಸಂಧಾನಕ್ಕೆ ಮುಂದಾಗುತ್ತಿದ್ದಾರೆ. ಇದೀಗ ಪಾನಿಪುರಿ ರಾಜಿ ಸಂಧಾನಕ್ಕೆ ಕಾದು ನೋಡೋಣ ಅಂತಿದ್ದಾರೆ. ಜೊತೆಗೆ ಕಿಟ್ಟಿ ಕಾನೂನು ಹೋರಾಟ ಮುಂದುವರೆಸುತ್ತಿವೆ ಎಂದು ಹೇಳಿದ್ದಾರೆ. ನಾಗರತ್ನ ಅವರು ರಾಜಿ ಬಗ್ಗೆ ನನ್ನ ಜೊತೆ ಮಾತನಾಡಿಲ್ಲ. ಇನ್ನೂ ಕೂಡ ಮಾರುತಿ ಗೌಡ ಆರೋಗ್ಯದಲ್ಲಿ ಚೇತರಿಕೆ ಕಾಣಬೇಕಿದೆ. ಹಾಗಾಗಿ ನನ್ನ ಮಗ ಗುಣವಾದ ನಂತರ ನೋಡೋಣ ಎನ್ನುವ ಮಾತನ್ನಾಡಿದ್ದಾರೆ.