ದಸರಾ ಹಿನ್ನೆಲೆ : ಬೆಂಗಳೂರು-ಕಾರವಾರ 2 ವಿಶೇಷ ರೈಲುಗಳ ಸಂಚಾರ | Janata news
ಬೆಂಗಳೂರು : ದಸರಾ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಂಗಳೂರಿನಿಂದ ಕಾರವಾರಕ್ಕೆ ಸೇಲಂ ಮೂಲಕ 2 ವಿಶೇಷ ರೈಲು ಸಂಚರಿಸಲಿದೆ.ವಿಶೇಷ ರೈಲುಗಳ ಸಂಚಾರ ಶುರು ಮಾಡುವ ಮೂಲಕ ಅಂದಾಜು ಒಂದು ತಿಂಗಳ ಬಳಿಕ ಬೆಂಗಳೂರಿನಿಂದ ಮಂಗಳೂರಿಗೆ ಮತ್ತೆ ರೈಲು ಕಾರ್ಯಾಚರಣೆ ನಡೆಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವೆ ಶಿರಾಡಿ ಘಾಟ್ನಲ್ಲಿ ಆಗಸ್ಟ್ನಲ್ಲಿ ಉಂಟಾಗಿದ್ದ ಭೂಕುಸಿತದಿಂದಾಗಿ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಸಂಪೂರ್ಣ ಸ್ತಬ್ದವಾಗಿತ್ತು.
2 ವಿಶೇಷ ರೈಲು:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಅ.5 ಮತ್ತು 7ರಂದು ಸಂಜೆ 6.50ಕ್ಕೆ ಕೆಎಸ್ಆರ್ ಬೆಂಗಳೂರು-ಕಾರವಾರ ಸ್ಪೆಷಲ್ ಎಕ್ಸ್ಪ್ರೆಸ್(ರೈಲು ಸಂಖ್ಯೆ 06523/06524)ಹೊರಡಲಿದೆ. ಮರುದಿನ ಸಂಜೆ 5.30ಕ್ಕೆ ಈ ರೈಲು ಕಾರವಾರ ತಲುಪಲಿದೆ.
ಅ.6 ಮತ್ತು 8ರಂದು ಸಂಜೆ 6.05ಕ್ಕೆ ಕಾರವಾರದಿಂದ ಹೊರಟು ಮರುದಿನ ಸಂಜೆ 4.05ಕ್ಕೆ ಬೆಂಗಳೂರು ತಲುಪಲಿದೆ.