ಪರ ಪುರುಷನೊಂದಿಗೆ ಮಲಗಿದ್ದನ್ನು ನೋಡಿದನೆಂದು ಕರುಳ ಕುಡಿಯನ್ನೇ ಕೊಂದ ನಿರ್ಧಯಿ ಅಮ್ಮ ! | Janata news
ಚಾಮರಾಜನಗರ : ತನ್ನನ್ನು ಪರಪುರುಷನೊಂದಿಗೆ ಕ್ರೀಡೆಯಲ್ಲಿ ತೊಡಗಿದ್ದನ್ನು ನೋಡಿದ್ದ ಮಗನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ ಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಅಕ್ಟೋಬರ್ 6 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಾಲಕನ ತಂದೆ ನಂಜುಂಡಸ್ವಾಮಿ ಅಕ್ಟೋಬರ್ 5 ಶುಕ್ರವಾರ ರಾತ್ರಿ ಮನೆಯಲ್ಲಿ ಇರಲಿಲ್ಲ ಆ ದಿನ, ಬಾಲಕನ ತಾಯಿ ಸವಿತಾ ಮತ್ತು ಆಕೆಯ ಪ್ರಿಯಕರ ನಾಗರಾಜಮೂರ್ತಿ ಕ್ರೀಡೆಯಲ್ಲಿ ತೊಡಗಿದ್ದನ್ನು ನೋಡಿದ್ದಾನೆ ಬಾಲಕ ಪ್ರೀತಂ, ಮಗ ಯಾರಿಗಾದರೂ ಹೇಳಿಯಾನು ಎಂದು ಆತಂಕಗೊಂಡ ಸಾಕಮ್ಮ ಮತ್ತು ಆಕೆಯ ಪ್ರಿಯಕರ ಬಾಲಕನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿ ಮಾಡಿದ್ದಾರೆ.
ನಂಜುಂಡಸ್ವಾಮಿ ಶುಕ್ರವಾರ ರಾತ್ರಿ ಅಡುಗೆ ಕಾಂಟ್ರಾಕ್ಟ್ ಇದ್ದರಿಂದ ಕೆಲಸ ಮುಗಿಸಿ ಶನಿವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮನೆಗೆ ಬಂದಿದ್ದಾನೆ. ಮನೆಗೆ ಬಂದಾಗ ಮಗ ಎಲ್ಲಿ ಎಂದು ಪತ್ನಿ ಸಾಕಮ್ಮಳನ್ನ ಕೇಳಿದ್ದಾನೆ. ಮಗ ಊಟ ಮಾಡಿ ಹೊರಗೆ ಆಟ ಆಡಲು ಹೋಗಿದ್ದಾನೆ ಎಂದು ಹೇಳಿದ್ದಾಳೆ. ನಂತರ ಸಂಜೆಯಾದ್ರೂ ಪ್ರೀತಂ ಮನೆಗೆ ಬರದೇ ಇದ್ದಾಗ ಇಬ್ಬರು ಸೇರಿ ಊರು, ಜಮೀನು ಹುಡುಕಿದ್ದಾರೆ. ಎಳ್ಳು ಸಿಗದೇಯಿದ್ದಾಗ, ಭಾನುವಾರ ಕೊಳ್ಳೇಗಾಲ ಪೊಲೀಸ್ ಠಾಣೆಗೆ ಹೋಗಿ ನಂಜುಂಡಸ್ವಾಮಿ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲು ಮಾಡಿದ್ದರು. ಅಕ್ಟೋಬರ್ 9 ಮಂಗಳವಾರ ಸಂಜೆ ವೇಳೆಗೆ ಸಿಲ್ಕಲ್ ಪುರ ಗ್ರಾಮದ ಕೆರೆಯಲ್ಲಿ ಮಗುವಿನ ಶವ ಪತ್ತೆಯಾದೆ. ಮಗುವಿನ ಶವ ಸಿಗುತ್ತಿದ್ದಂತೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಗಂಡನಿಗೆ ಅನೈತಿಕ ಸಂಬಂಧ ತಿಳಿಯಬಾರದು ಎಂಬ ಉದ್ದೇಶದಿಂದ ಪ್ರಿಯಕರ ನಾಗರಾಜು ಜೊತೆಗೆ ಸೇರಿ ಮಗ ಪ್ರೀತಂನ ಕುತ್ತಿಗೆಯನ್ನ ಹಿಸುಕಿ ಕೊಲೆ ಮಾಡಿದ್ದೇವು ಎಂದು ಒಪ್ಪಿಕೊಂಡಿದ್ದಾಳೆ.ಕೊಳ್ಳೇಗಾಲ ಸಿಪಿಐ ರಾಜಣ್ಣ, ಗ್ರಾಮಾಂತರ ಪಿಎಸ್ಐ ವನರಾಜು ನೇತೃತ್ವದಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ.