ಕಾರ್ಮಿಕ ಸಚಿವರ ಜಿಲ್ಲೆಯಲ್ಲೇ ಕಾರ್ಮಿಕನನ್ನು ಮ್ಯಾನ್ ಹೋಲ್ಗೆ ಇಳಿಸಿ ಕ್ಲೀನ್ | Janata news
ಚಿತ್ರದುರ್ಗ : ಆಧುನಿಕ ಸಕ್ಕಿಂಗ್ ಯಂತ್ರಗಳಿದ್ದಾಗಿಯೂ ಕೆಎಸ್ಟಿಸಿ ಬಸ್ ನಿಲ್ದಾಣ ಬಳಿ ಮ್ಯಾನ್ ಹೋಲ್ಗೆ ಕಾರ್ಮಿಕರನ್ನು ಇಳಿಸಿ ಸ್ವಚ್ಛಗೊಳಿಸುವ ಕಾರ್ಯ ಮಾಡಿಸಲಾಗಿದೆ. ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲೇ ಇಂತಹ ಘಟನೆ ನಡೆದಿದೆ.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಮ್ಯಾನ್ಹೋಲ್ಗೆ ನಗರಸಭೆ ಅಧಿಕಾರಿಗಳು ನಗರಸಭೆ ಗುತ್ತಿಗೆದಾರ ಕಾರ್ಮಿಕ ಮಣಿ ಎಂಬ ಕಾರ್ಮಿಕನನ್ನು ಮ್ಯಾನ್ ಹೋಲ್ಗೆ ಇಳಿಸಿ ಕ್ಲೀನ್ ಕೆಲಸ ಮಾಡಿಸಿದ್ದು, ಅಮಾನವೀಯತೆ ಮೆರೆದಿದ್ದಾರೆ ಎನ್ನಲಾಗಿದೆ. ಕಾರ್ಮಿಕ ಸಚಿವರ ಜಿಲ್ಲೆಯಲ್ಲೇ ಕಾರ್ಮಿಕರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
English summary :Labors Clean The Man Hole Manually In Chitradurga