ರಸ್ತೆಯಲ್ಲಿ ಕಸ ಚೆಲ್ಲುವರವರ ವಿರುದ್ಧ ಕ್ರಿಮಿನಲ್ ಮುಕದ್ದಮೆ ದಾಖಲಿಸಲು ಹೈಕೋರ್ಟ್ ತಾಕಿತು | Janata news
ಬೆಂಗಳೂರು : ರಸ್ತೆಯ ಮೇಲೆ ಎಲ್ಲೆಂದರಲ್ಲಿ ಕಸ ಚೆಲ್ಲುವವರ ವಿರುದ್ಧ ಕ್ರಿಮಿನಲ್ ಮುಕದ್ದಮೆ ಹೂಡಿ ದಂಡ ವಿದಿಸಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ನಿರ್ದೇಶನ ನೀಡಿದೆ.
ಪೂರ್ವ ಬೆಂಗಳೂರಿನ ದೇವಾಲಯದ ಮುಂದೆ ಕಸದ ತೊಟ್ಟಿಯನ್ನು ಸ್ಥಾಪಿಸಿರುವ ವಿರುದ್ಧ ನರಸಿಂಹ ಮೂರ್ತಿ ಮತ್ತು ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತ್ರತ್ವದ ವಿಭಾಗೀಯ ನ್ಯಾಯಪೀಠ ಇಂದು ಸೋಮವಾರ ವಿಚಾರಣೆ ನಡೆಸಿತು. ನಗರವನ್ನು ಕಸಮುಕ್ತ ಗೊಳಿಸುವ ನಿಟ್ಟಿನಲ್ಲಿ ಬಿ.ಪಿ.ಎಂ.ಪಿ. ಗೆ ಹೈಕೋರ್ಟ್ ಸರಣಿ ಸೂಚನೆಗಳನ್ನು ನೀಡಲು ಈ ಅರ್ಜಿಯು ಉತ್ತೇಜಿಸಿದೆ.
ಬಹುತೇಕ ವಾರ್ಡ್ಗಳಲ್ಲಿ ಪೌರ ಕಾರ್ಮಿಕರು ಕಸ ವಿಲೇವಾರಿ ಮಾಡಿ ರಂಗೋಲಿ ಬಿಡಿಸಿದರೂ, ಜನರು ರಂಗೋಲಿ ಮೇಲೂ ಕಸ ಚೆಲ್ಲಿ ಹೋಗುತ್ತಿದ್ದಾರೆ, ಎಂದು ಬಿಬಿಎಂಪಿ ಪರ ವಕೀಲರ ಹೇಳಿಕೆಗೆ ಕೆಂಡಾಮಂಡಲವಾದ ದಿನೇಶ್ ಮಾಹೇಶ್ವರಿ, ಇಂತಹವರನ್ನು ಸುಮ್ಮನೇ ಬಿಡಬೇಡಿ. ರಂಗೋಲಿ ಮೇಲೂ ಕಸ ಚೆಲ್ಲಿದವರ ವಿರುದ್ಧ ಕರ್ನಾಟಕ ಪೌರಾಡಳಿತ ಕಾಯ್ದೆ 1976ರ ಪ್ರಕಾರ ಕ್ರಿಮಿನಲ್ ಕೇಸು ಹಾಕಿ, ದಂಡ ವಿಧಿಸಿ ಎಂದಿದ್ದಾರೆ.
ವಿಚಾರಣೆಯನ್ನು 15ಕ್ಕೆ ಮುಂದೂಡುವ ಮೊದಲು, ಮುಂದಿನ ವಿಚಾರಣೆ ವೇಳೆಗೆ ಈ ರೀತಿ ಕಸ ಚೆಲ್ಲುವವರ ವಿರುದ್ಧ ಜರುಗಿಸುವ ಕ್ರಮಗಳ ಕುರಿತು ಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿ, ಎಲ್ಲ ಅಂಕಿ ಅಂಶಗಳನ್ನು ನೀಡಿ, ಎಂದು ಆದೇಶ ನೀಡಿದರು.