ಅನಂತ್ಕುಮಾರ್ ನಿಧನದಿಂದ ಆಘಾತವಾಗಿದೆ: ಸಿಎಂ ಕುಮಾರಸ್ವಾಮಿ | Janata news
ಬೆಂಗಳೂರು : ಆತ್ಮೀಯ ಸ್ನೇಹಿತ ಹಾಗೂ ಅಜಾತಶತ್ರುವಾಗಿದ್ದ ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಮುಖಂಡ ಅನಂತಕುಮಾರ್ ಸಾವಿನ ಸುದ್ದಿ ಸಿಡಿಲುಬಡಿದಂತಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
ಸಿಎಂ ಎಚ್ಡಿ ಕುಮಾರಸ್ವಾಮಿ ಅನಂತ ಕುಮಾರ್ ಅವರ ಅಂತಿಮ ದರ್ಶನ ಪಡೆದಿದ್ದು, ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಅವರ ಅಗಲಿಕೆ ಅನಿರೀಕ್ಷಿತ. ಅನಂತ ಕುಮಾರ್ ಅವರು ಸಾಮಾನ್ಯ ಕುಟುಂಬದಿಂದ ಬಂದು ರಾಷ್ಟ್ರಮಟ್ಟಕ್ಕೆ ಬೆಳೆದರು. ಅವರ ಸಾವು ರಾಜ್ಯಕ್ಕೆ ಉಂಟಾಗಿರುವ ನಷ್ಟ. ಕೇಂದ್ರ ಸಚಿವರಾಗಿ ಅನಂತ ಕುಮಾರ್ ನಾಡಿನ ಪರವಾಗಿ ಕೆಲಸ ಮಾಡಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅತ್ಯಂತ ಆಪ್ತ ಗೆಳೆಯರೊಬ್ಬರನ್ನು ನಾನು ಕಳೆದುಕೊಂಡಿದ್ದೇನೆ. ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಎಲ್ಲರಿಗೂ ನೀಡಲಿ ಎಂದು ಸಿಎಂ ಕಂಬನಿ ಮಿಡಿದಿದ್ದಾರೆ. ಜವರಾಯ ಕರೆದಾಗ ಎಲ್ಲರೂ ಹೋಗಬೇಕು. ಇದರಿಂದ ಯಾರು ಹೊರತಲ್ಲ ಎಂದು ಹೇಳಿದರು.