ಮದುವೆ ದಿನ ವರ ಪರಾರಿ: ಆದರೂ ನಡೆಯಿತು ವಧುವಿಗೆ ಕಲ್ಯಾಣ | Janata news
ಮಂಡ್ಯ : ಮದುವೆ ಹಿಂದಿನ ದಿನವೇ ಮದುವೆಯಾಗಬೇಕಿದ್ದ ವರ ಶಿವನಂಜೇಗೌಡರ ಪುತ್ರ ಅಭಿಜಿತ್ ಗೌಡ ತನ್ನ ಪ್ರೇಯಸಿಯೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಆದರೆ ಅದೇ ಮುಹೂರ್ತದಲ್ಲಿ ವಧುವಿಗೆ ಮದುವೆ ನಡೆದಿರುವ ವಿಚಿತ್ರ ಪ್ರಕರಣ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ ಶೆಟ್ಟಿ ಹಳ್ಳಿಯಲ್ಲಿ ನಡೆದಿದೆ.
ಸಕ್ಕರೆನಾಡು ಮಂಡ್ಯಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಅಭಿಜಿತ್ ಗೌಡನ ವಿವಾಹ ತನ್ನದೇ ಗ್ರಾಮದ ಯುವತಿಯೊಂದಿಗೆ ಮಂಡ್ಯದ ಬಿಜಿಎಸ್ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಬೇಕಿತ್ತೆಂದು ಆದರೆ, ನಿನ್ನೆ ರಾತ್ರಿ ದಿನವೇ ಪ್ರೇಯಸಿ ಜೊತೆ ವರ ಪರಾರಿಯಾದ ಘಟನೆ ನಡೆದಿದೆ.
ಮಧುಮಗ ಅಭಿಜಿತ್ ಗೌಡ ಖಾಸಗಿ ಮೊಬೈಲ್ ಕಂಪನಿಯ ಟವರ್ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಈತನಿಗೆ ಶ್ರೀರಂಗಪಟ್ಟಣ ತಾಲೂಕಿನ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ಆದರೆ ಆತ ಅಬಿಜಿತ್ ಅದೇ ಗ್ರಾಮದ ಯುವತಿ, ಮೈಸೂರಿನ ಕಾಲೇಜೊಂದರಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದವಳ ಜೊತೆ ಪರಾರಿಯಾಗಿದ್ದಾನೆ.
ಇನ್ನೂ ಅಭಿಜಿತ್ ಜತೆಗೆ ವಿವಾಹವಾಗಬೇಕಿದ್ದ ಶ್ರೀರಂಗಪಟ್ಟಣ ತಾಲೂಕಿನ ಯುವತಿಯ ಕುಟುಂಬ ಕಂಗಾಲಾದೆ, ವರ ನಾಪತ್ತೆಯಾದ ಹಿನ್ನಲೆಯಲ್ಲಿ ಯುವತಿಯ ಸೋದರ ಮಾವನ ಜೊತೆ ಮದುವೆ ಮಾಡಲಾಗಿದೆ. ಈ ಸಂಬಂಧ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.