ಶಾಲೆಯಲ್ಲಿ ಅವಮಾನ :ನಾಲ್ಕು ದಿನದಿಂದ ವಿದ್ಯಾರ್ಥಿ ನಾಪತ್ತೆ | Janata news
ಚಾಮರಾಜನಗರ : ಶಾಲಾ ಶುಲ್ಕ ಕಟ್ಟಲಿಲ್ಲವೆಂದು ಕೋಪಗೊಂಡ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿ ಮೇಲೆ ಎಂಜಲು ನೀರು ಎರಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಸಂತ್ರಸ್ತ ಬಾಲಕ ನಾಪತ್ತೆಯಾಗಿ ಪಾಲಕರಲ್ಲಿ ಆತಂಕ ಮೂಡಿಸಿದ್ದಾನೆ.
ಜಿಲ್ಲೆಯ ಕೊಳ್ಳೇಗಾಲದಲ್ಲಿರುವ ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ಮನೋಜ್ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಕೊಳ್ಳೇಗಾಲದಲ್ಲಿ ಶಾಲಾ ಆಡಳಿತ ಮಂಡಳಿಯ ಖಜಾಂಚಿ S.N. ಪ್ರಸಾದ್ ಎಂಬವರು ಶುಲ್ಕ ಕಟ್ಟದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ. ಶಾಲೆಯಲ್ಲಾದ ಅವಮಾನವನ್ನು ತಾಳಲಾರದೇ ಮನನೊಂದು ಮನೋಜ್ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.
English summary :Insult in school: student missing four days