ಪ್ರವಾಸಕ್ಕೆ ಬಂದಿದ್ದ ಬಸ್ ಅಪಘಾತ: ವಿದ್ಯಾರ್ಥಿ ಸಾವು | Janata news
ಮೈಸೂರು: : ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಖಾಸಗಿ ಬಸ್ ರಸ್ತೆ ಬದಿಗೆ ಪಲ್ಟಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿ ಸಾವನಪ್ಪಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಶಾಂತಿಗೇರಿ ತಿರುವಿನಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆ ಕುರುಗೋಡು ತಾಲ್ಲೂಕು ಗೆಣಿಕೆಹಾಳ್ ಸರಕಾರಿ ಪ್ರೌಢಶಾಲೆಯಿಂದ ವಿದ್ಯಾರ್ಥಿಗಳು ಡಿ. 25ರಂದು ಶೈಕ್ಷಣಿಕ ಪ್ರವಾಸಕ್ಕೆಂದು KA 22B 5731 ನೋಂದಣಿಯ ಬಸ್ನಲ್ಲಿ ಹೊರಟಿದ್ದಾರೆ. 48 ಮಂದಿ (27 ಬಾಲಕರು ಮತ್ತು 21 ಬಾಲಕಿಯರು) ಸೇರಿದಂತೆ 6 ಮಂದಿ ಶಿಕ್ಷಕರು, ಒಬ್ಬ ಡಿಗ್ರೂಪ್ ನೌಕರ, ಇಬ್ಬರು ಚಾಲಕರು ಮತ್ತು ಓರ್ವ ಕ್ಲೀನರ್ ಸೇರಿದಂತೆ ಒಟ್ಟು 58 ಮಂದಿ ಬಸ್ ನಲ್ಲಿದ್ದರು. ಇಂದು ನಸುಕಿನ ಜಾವ 2.30ರ ವೇಳೆ ಅಪಘಾತಕ್ಕೀಡಾಗಿದೆ. ಚಾಲಕನ ಹತೋಟಿ ತಪ್ಪಿದ ಬಸ್ ರಾಷ್ಟ್ರೀಯ ಹೆದ್ದಾರಿ ಬದಿಯಿರುವ ಶಾಂತಗೇರಿ ತೋಟದ ಗೇಟ್ ಬಳಿ ರಸ್ತೆ ಬದಿಗೆ ಮಗುಚಿಕೊಂಡಿದೆ.
ಬಸ್ ಅಪಘಾತದಲ್ಲಿ ಹತ್ತನೇ ತರಗತಿ ಬಸವರಾಜು ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಚಾಲಕ ಹಾಗೂ ಅಡುಗೆ ಸಹಾಯಕ ಮತ್ತು ನಾಲ್ವರು ಗಾಯ ಗೊಂಡಿದ್ದಾರೆ.