ಚಾಲನಾ ಪಚಾಲನಾ ಪರವಾನಗಿಯೊಂದಿಗೆ ಆಧಾರ್ ಲಿಂಕ್ ಶೀಘ್ರ :ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ | Janata news
ನವದೆಹಲಿ : ವಾಹನ ಚಾಲನಾ ಪರವಾನಗಿಗಳನ್ನು(ಡ್ರೈವಿಂಗ್ ಲೈಸೆನ್ಸ್) ಆಧಾರ್ ಗೆ ಲಿಂಕ್ ಮಾಡಿಸುವುದನ್ನು ಸರಕಾರ ಕಡ್ಡಾಯ ಗೊಳಿಸಲಿದೆ, ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಇಲ್ಲಿರುವ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಕಾನೂನು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ರವಿಶಂಕರ್ ಪ್ರಸಾದ್, ಅತೀಶಿಘ್ರದಲ್ಲಿ ನಾವು ವಾಹನ ಚಾಲನಾ ಪರವಾನಗಿಯೊಂದಿಗೆ ಆಧಾರ್ ಅನ್ನು ಸಂಪರ್ಕಿಸಲು ಕಡ್ಡಾಯ ಮಾಡುವ ಕಾನೂನನ್ನು ತರಲಿದ್ದೇವೆ, ಎಂದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ, ಅಪಘಾತ ಉಂಟುಮಾಡುವ ತಪ್ಪಿತಸ್ಥ ವ್ಯಕ್ತಿಯು ದೃಶ್ಯವನ್ನು ತಪ್ಪಿಸಿಕೊಂಡು ನಕಲಿ ಪರವಾನಗಿ ಪಡೆಯುತ್ತಾನೆ. ಇದು ಆತನಿಗೆ ಸ್ಕಾಟ್-ಫ್ರೀ ಯಾಗುವುದಕ್ಕೆ ಸಹಾಯ ಮಾಡುತ್ತದೆ. ಆದರೆ, ಆಧಾರ್ ಲಿಂಕ್ ಆಗಿದ್ದಾಗ, ನೀವು ನಿಮ್ಮ ಹೆಸರನ್ನು ಬದಲಾಯಿಸಬಹುದು, ಆದರೆ ನಿಮ್ಮ ಬಯೋಮೆಟ್ರಿಕ್ಸ್ ಬದಲಿಸಲು ಸಾದ್ಯವಿಲ್ಲ ಅಥವಾ ನಿಮ್ಮ ಕಣ್ಣಿನ ಐರಿಸ್ ಅಥವಾ ಬೆರಳಚ್ಚು ಬದಲಿಸಲು. ಹಾಗಾಗಿ, ನೀವು ನಕಲಿ ಪರವಾನಗಿಗಾಗಿ ಪ್ರಯತ್ನಿಸಿದ ಕ್ಷಣ, ಈ ವ್ಯಕ್ತಿಯು ಈಗಾಗಲೇ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾರೆ ಮತ್ತು ಹೊಸದನ್ನು ನೀಡಬಾರದು ಎಂದು ಸಿಸ್ಟಮ್ ಹೇಳುತ್ತದೆ, ಎಂದು ಪ್ರಸಾದ್ ತಿಳಿಸಿದರು.
ಕೇಂದ್ರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ, ನಗರ-ಗ್ರಾಮೀಣ ವಿಭಜನೆಯನ್ನು ಅದು ಕಡಿತಗೊಳಿಸಿದೆ, ಎಂದು ಸಚಿವರು ಹೇಳಿದರು.