ಭಾರತದ ಪತ್ರಿಕಾಗೋಷ್ಠಿ : ಮಿಗ್-21 ಪೈಲೆಟ್ ಬಂಧಿಸಿರುವುದಾಗಿ ಹೇಳಿದ ಪಾಕ್ | Janata news
ನವದೆಹಲಿ : ಭಯೋತ್ಪಾದನೆಯ ವಿರುದ್ಧ ಭಾರತದ ವಾಯುದಾಳಿಗೆ ಪ್ರತಿಯಾಗಿ ಇಂದು ಮುಂಜಾನೆ ಪಾಕಿಸ್ತಾನ ತನ್ನ ವಾಯುಸೇನೆಯ ಯುದ್ದವಿಮಾನ ಬಳಸಿ ಭಾರತೀಯ ಸೇನಾನೆಲೆಗಳ ಮೇಲೆ ದಾಳಿಗೆ ಮುಂದಾಗಿತ್ತು. ಆದರೆ, ಭಾರತದ ಅತ್ಯಂತ ಮುಂಜಾಗುರಕತೆ ಹಾಗೂ ಸದಾ ಸನ್ನದ್ಧ ಸೇನೆಯ ಪರಿಣಾಮ ಪಾಕಿಸ್ತಾನದ ಪ್ರಯತ್ನವನ್ನು ಸಂಪೂರ್ಣ ವಿಫಲಗೊಳಿಸಲಾಗಿದೆ, ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಇಂದು ಮದ್ಯಾಹ್ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ಏರ್ ವೈಸ್ ಮಾರ್ಷಲ್ ಆರ್.ಜಿ.ಕೆ.ಕಪೂರ್ ಉಪಸ್ಥಿತರಿದ್ದರು.
ಪಾಕಿಸ್ತಾನದ ಯುದ್ದ ವಿಮಾನವನ್ನು ಕೂಡಲೇ ಕಂಡುಹಿಡಿಯಲಾಯಿತು ಮತ್ತು ಭಾರತೀಯ ವಾಯುಸೇನೆ ತಕ್ಷಣ ಕಾರ್ಯಪ್ರವರ್ತ್ತವಾಯಿತು. ಆಕಾಶದಲ್ಲಿ ಈ ಮೂಲಕ ಪಾಕಿಸ್ತಾನದ ಒಂದು ಯುದ್ದ ವಿಮಾನವನ್ನು ಹೊಡೆದುರುಳಿಸುವಲ್ಲಿ ಭಾರತದ ಮಿಗ್-21 ಯುದ್ದ ವಿಮಾನ ಯಶಸ್ವಿಯಾಗಿದೆ. ಭೂ ಸೇನೆಯ ಪ್ರಕಾರ ಪಾಕಿಸ್ತಾನದ ಯುದ್ದ ವಿಮಾನ ಆಗಸದಿಂದ ಪಾಕಿಸ್ತಾನದ ಗಡಿಯಲ್ಲಿ ಬೀಳುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಭಾರತವು ಒಂದು ಮಿಗ್-21 ಯುದ್ದ ವಿಮಾನವನ್ನು ಕಳೆದುಕೊಂಡಿದೆ. ಈ ವಿಮಾನದ ಪೈಲಟ್ ಸದ್ಯ ನಾಪತ್ತೆಯಾಗಿದ್ದು, ಪಾಕ್ ಈತನನ್ನು ಬಂಧಿಸಿರುವುದಾಗಿ ಹೇಳಿದೆ, ಎಂದು ವಿಜಯ್ ಗೋಖಲೆ ತಿಳಿಸಿದ್ದಾರೆ.
LIVE Now: Press conference by @MEAIndia https://t.co/sFB9fZaGnv
— PIB India (@PIB_India) February 27, 2019