ಗೆಜ್ಜೆ ಕಟ್ಟಿ ಕುಣಿಯುವಾಗಲೇ ಕುಸಿದು ಮೃತಪಟ್ಟ ಯಕ್ಷಗಾನ ಕಲಾವಿದ | Janata news
ಉಡುಪಿ : ಭಾನುವಾರ ರಾತ್ರಿ ರಂಗಸ್ಥಳದಲ್ಲಿ ಸಾಲ್ವನ ಪಾತ್ರದಲ್ಲಿ ಅಭಿನಯಿಸುತ್ತಿರುವಾಗಲೇ ಚಂದ್ರಹಾಸ ಹುಡಗೋಡು ಕುಸಿದು ಬಿದ್ದು ಬಣ್ಣದ ಬದುಕಿಗೆ ವಿದಾಯ ಹಾಡಿದ್ದಾರೆ.
ಬೈಂದೂರಿನ ಜೋಗಿಬೆಟ್ಟು ಗ್ರಾಮದಲ್ಲಿ ಯಕ್ಷಗಾನ ನಡೆಯುತ್ತಿದ್ದ ವೇಳೆಯೇ, ಸಂಭಾಷಣೆ ಮುಗಿಸಿ ಕುಣಿತ ಆರಂಭಿಸುತ್ತಿದ್ದಂತೆ ಹೃದಯಾಘಾತ ಸಂಭವಿಸಿದ್ದು, ರಂಗಸ್ಥಳದಲ್ಲಿಯೇ ಕಲಾವಿದ ಹುಡಗೋಡು ಚಂದ್ರಹಾಸ (52) ಕುಸಿದು ಬಿದ್ದು ಮೃತರಾಗಿದ್ದಾರೆ.
ಚಂದ್ರಹಾಸ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹುಡುಗೋಡಿನವರು. ಅವರು ಕಳೆದ 30 ವರ್ಷಗಳಿಂದ ಯಕ್ಷಗಾನದಲ್ಲಿ ವಿವಿಧ ಪಾತ್ರಗಳನ್ನು ನಿಭಾಯಿಸಿ, ಯಕ್ಷಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು. ಯಕ್ಷ ದಿಗ್ಗಜರೆನಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಮಹಾಬಲ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್ ಸೇರಿದಂತೆ ಇನ್ನಿತರ ಕಲಾವಿರೊಂದಿಗೆ ನಾಯಕ ಪ್ರತಿಯಾಕನಾಗಿ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸುತ್ತಿದ್ದರು.