ಮಿನಿಬಸ್ಗೆ ಲಾರಿ ಡಿಕ್ಕಿ: ಸ್ಥಳದಲ್ಲೇ ಮೂವರ ದುರ್ಮರಣ, 16 ಮಂದಿಗೆ ಗಾಯ | Janata news
ಹಾವೇರಿ : ಮಿನಿಬಸ್ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ದುರ್ಮರಣ ಹೊಂದಿರುವ ಘಟನೆ ಹಾವೇರಿ ಹೊರವಲಯದಲ್ಲಿ ನಡೆದಿದೆ.
ಖಾದರ್(45), ರಬ್ಬಾನಿ(50) ಹಾಗೂ ಶಬ್ಬೀರ್ (45) ಮೃತ ದುರ್ದೈವಿಗಳು. ದುರಂತದಲ್ಲಿ 16 ಜನರು ಗಾಯಗೊಂಡಿದ್ದಾರೆ ಮತ್ತು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತರು ಮತ್ತು ಗಾಯಾಳುಗಳು ಎಲ್ಲರೂ ಸವಣೂರು ಗ್ರಾಮದ ರಬ್ಬಾನಿ ಬ್ಯಾಂಡ್ ಕಂಪನಿಯ ಕಲಾವಿದರು.
ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಬುಧವಾರ ರಾತ್ರಿ ಗಲೀಫ ಉರುಸ್ ಮುಗಿಸಿಕೊಂಡು ಸವಣೂರು ಪಟ್ಟಣದತ್ತ ಮಿನಿ ಬಸ್ ತೆರಳುತ್ತಿತ್ತು. ಬೆಳಗಿನ ಜಾವ ಸುಮಾರು 3.50ಕ್ಕೆ ಲಾರಿ ಹುಬ್ಬಳ್ಳಿಯತ್ತ ಎಳನೀರು ತುಂಬಿಕೊಂಡು ಹೋಗುತ್ತಿತ್ತು. ಈ ವೇಳೆ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಮಿನಿ ಬಸ್ಸಿಗೆ ಡಿಕ್ಕಿ ಹೊಡೆದಿದೆ.