ಲೋಕಸಭೆ ಚುನಾವಣೆ ಬಳಿಕ ಎಚ್ ಡಿ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ: ಈಶ್ವರಪ್ಪ ವಿವಾದಾತ್ಮಕ ಹೇಳಿಕೆ | Janata news
ಕೊಪ್ಪಳ : ಲೋಕಸಭಾ ಚುನಾವಣೆ ಬಳಿಕ ಎಚ್ ಡಿ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ. ಸರ್ಕಾರ ಬಿದ್ದೋಗುತ್ತದೆ. ಎಂತೆಂಥವರೋ ನೆಗೆದುಬಿದ್ದೋಗಿದ್ದಾರೆ ಎಂದು ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇಡೀ ದೇಶಕ್ಕೆ ಮೋದಿ ಪ್ರಧಾನಿಯಾಗ್ತಾರೆ, ಸಗಣ್ಣ ಗೆದ್ದೇ ಗೆಲ್ತಾರೆ, 20ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆದ್ದೇ ಗೆಲ್ಲುತ್ತೆ, ಚುನಾವಣೆ ಮುಗಿದ ಕೂಡಲೇ ಕುಮಾರಸ್ವಾಮಿ ನೆಗದು ಬಿದ್ದುಹೋಗ್ತಾರೆ. ಸರ್ಕಾರ ಬೀಳುತ್ತೆ ಎಂಬ ಆತಂಕದಲ್ಲಿ ಸಿಎಂ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ ಎಂದು ವ್ಯಂಗ್ಯವಾಡಿದರು. ಈ ನಾಟಕ ಬಹಳ ದಿನ ನಡೆಯುವುದಿಲ್ಲ. ಎಚ್ಡಿಕೆ ಬರೆದಿಟ್ಟುಕೊಳ್ಳಲಿ. ಒಂದೇ ಒಂದು ಕ್ಷೇತ್ರದಲ್ಲೂ ಅವರಿಗೆ ಗೆಲುವು ದಕ್ಕುವುದಿಲ್ಲ ಎಂದು ಹೇಳಿದರು.
English summary : HD Kumaraswamy going to be dead after Lok Sabha election: Ishwarappa controversial statement