ಅಣ್ಣ-ತಂಗಿ ಮೇಲೆ ಹರಿದ ಲಾರಿ, ಇಬ್ಬರೂ ಸ್ಥಳದಲ್ಲೇ ಮೃತ! | Janata news
ರಾಯಚೂರು : ಅಣ್ಣ-ತಂಗಿ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಅಸ್ಕಿಹಾಳ ಗ್ರಾಮದ 26 ವರ್ಷದ ಗೌರಿಶಂಕರ್ ಹಾಗೂ 22 ವರ್ಷದ ಕೀರ್ತಿ ಮೃತ ದುರ್ದೈವಿಗಳು.
ಗೌರಿಶಂಕರ್ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಹೆಂಡತಿಯನ್ನು ಮಾತನಾಡಿಸಿಕೊಂಡು ವಾಪಸಾಗುತ್ತಿದ್ದರು. ಜೊತೆಗೆ ಆತನ ಸಹೋದರಿ ಕೀರ್ತಿ ಮತ್ತು ಮಗ ಇದ್ದರು.
ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ಘಟನೆ ನಡೆದಿದ್ದು, ಗೌರಿಶಂಕರ್ ಅವರ ಮಗ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ. ಬೈಕ್ನಲ್ಲಿ ಹೋಗುತ್ತಿರುವ ವೇಳೆ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆ ಪರಿಣಾಮ ಎಲ್ಲರೂ ಲಾರಿಯ ಚಕ್ರಕ್ಕೆ ಸಿಲುಕಿದ್ದಾರೆ.
English summary :Accident in Rayachur