ದಿ. ಮನೋಹರ್ ಪರಿಕ್ಕರ್ ಟೀಕಿಸಿದ ಶರದ್ ಪವಾರ್ ಗೆ ಪರಿಕ್ಕರ್ ಮಗನ ಪತ್ರ : ವೈರಲ್ | Janata news
ಪಣಜಿ : ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಜಿ ರಕ್ಷಣಾ ಸಚಿವ ಹಾಗೂ ಮಾಜಿ ಗೋವಾ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಹೆಸರನ್ನು ಅನವಶ್ಯಕವಾಗಿ ಪ್ರಸ್ತಾಪಿಸಿ ಕೆಸರೆರಚಾಟ ಬಳಸಿದ್ದಕ್ಕಾಗಿ ಏನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ ಗೆ ಮನೋಹರ್ ಪರಿಕ್ಕರ್ ಅವರ ಮಗ ಉತ್ಪಲ್ ಪರಿಕ್ಕರ್ ಪತ್ರ ಬರೆದಿದ್ದು, ಸಾಕಷ್ಟು ವೈರಲ್ ಆಗಿದೆ.
ಪತ್ರದಲ್ಲಿ ತಮ್ಮ ತಂದೆಯ ವಿರುದ್ಧ ಬಳಸಿದ ಪದಗಳ ಕುರಿತು ವಿಷಾದ ವ್ಯಕ್ತಪಡಿಸಿರುವ ಉತ್ಪಲ್ ಪರಿಕ್ಕರ್, ನನ್ನ ತಂದೆ ಸಾವುಬದುಕಿನ ನಡುವೆ ಹೊರಡುತ್ತಿರುವಾಗಲು ತಮ್ಮ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ರಾಜಕೀಯ ನಾಯಕರೊಬ್ಬರು ಅವರ ಹೆಸರನ್ನು ಹೆಸರನ್ನು ಎಳೆದು ತಂದಿದ್ದರು. ಅವರ ಅಸಂಬದ್ಧ ಮಾತಿಗೆ ಆಗ ನನ್ನ ತಂದೆಯವರು ಸಲಹೆಯೊಂದಿಗೆ ತಕ್ಕ ಉತ್ತರ ನೀಡಿ ಪತ್ರ ಬರೆದಿದ್ದರು, ಎಂದು ಕಾಂಗ್ರೆಸ್ ರಾಷ್ಟೀಯ ಅಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನು ಪ್ರಸ್ತಾಪಿಸದೆ ನೆನಪಿಸಿದ್ದಾರೆ.
ಶರದ್ ಪವಾರ್ ಗೆ ಬರೆದಿರುವ ತಮ್ಮ ಪತ್ರದಲ್ಲಿ, ಈಗ ತಂದೆಯವರು ನಮ್ಮೊಂದಿಗೆ ಇಲ್ಲದ ಕಾರಣ ಸುಲಭವಾಗಿ ಸಂದರ್ಭದ ಲಾಭ ಪಡೆಯಲು ನೀವು ಅವರ ಹೆಸರನ್ನು ಬಳಸಿ ಸುಳ್ಳು ಹೇಳಿದ್ದು, ಇದು ತುಂಬಾ ನೀಚ ರಾಜಕಾರಣವಾಗಿದೆ, ಎಂದು ಟೀಕಿಸಿದ್ದಾರೆ.
ಭಾರತದ ಸೇನೆಯನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಅನೇಕ ಐತಿಹಾಸಿಕ ತೀರ್ಮಾನಗಳನ್ನ ಪರಿಕ್ಕರ್ ಅವರು ಕೈಗೊಂಡಿದ್ದರು, ಅವುಗಳಲ್ಲೂ, ರಾಫೆಲ್ ಯುದ್ಧ ವಿಮಾನಗಳ ಖರೀದಿಯ ಪ್ರಮುಖ ರೂವಾರಿಯಾಗಿದ್ದರು. ಹಿಂದೊಮ್ಮೆ ರಕ್ಷಣಾ ಸಚಿವರಾಗಿದ್ದ ನೀವು ಸೈನ್ಯವನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ನೀವು ಬಲ್ಲಿರಿ ಎಂದು ತಿಳಿದಿದ್ದೇನೆ. ಆದರೆ, ನೀವು ಸೈನಿಕರ ಬಲವನ್ನು ಕುಗ್ಗಿಸುವಂತಹ ದುರುದ್ದೇಶದಿಂದ ಕೂಡಿದ ಅಪಪ್ರಚಾರದಲ್ಲಿ ತೊಡಗಿದ್ದವರೊಂದಿಗೆ ಸೇರಿದ್ದನ್ನು ತಿಳಿದು ತುಂಬಾ ವಿಷಾದ ಪಡಿಸುತ್ತಿದ್ದೇನೆ. ನನ್ನ ತಂದೆ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾಗಲೂ ಅವರ ಬಗ್ಗೆ ತಿಳಿದುಕೊಳ್ಳಲೂ ಯೋಚಿಸದ ಜನರು, ಈಗ ಅವರ ಹೆಸರಿಗೆ ಕೆಸರೆರೆಚಲು ಪ್ರಾರಂಭಿಸಿದ್ದಾರೆ. ಈ ರೀತಿ ಮಾಡುವುದನ್ನು ಬಿಟ್ಟು ಬಿಡಿ ಎಂದು ಒತ್ತಾಯಿಸುತ್ತೇನೆ, ಎಂದು ಉತ್ಪಲ್ ಪರಿಕ್ಕರ್ ಬರೆದಿದ್ದಾರೆ.