ಐ.ಎನ್.ಎಸ್ ವಿಕ್ರಮಾದಿತ್ಯ ದಲ್ಲಿ ಬೆಂಕಿ : ನೌಕಾ ಕಮಾಂಡರ್ ಹುತಾತ್ಮ, ಇತರರಿಗೆ ಗಾಯ | Janata news
ಕಾರವಾರ : ಭಾರತೀಯ ನೌಕಾಪಡೆಯ ಪ್ರತಿಷ್ಠಿತ ಐ.ಎನ್.ಎಸ್ ವಿಕ್ರಮಾದಿತ್ಯ ಯುದ್ದ ನೌಕೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇಂದು ಬೆಳಿಗ್ಗೆ ಕಾರವಾರದ ಅರಗಾ ಗ್ರಾಮದ ಕದಂಬ ನೌಕಾನೆಲೆಯ ಬಂದರು ಪ್ರವೇಶಿಸುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.
ಯುದ್ಧ ನೌಕೆಯ ಬಾಯ್ಲರ್ ಕಂಪಾರ್ಟಮೆಂಟ್ ಆಕಸ್ಮಿಕ ಬೆಂಕಿ ಅನಾಹುತ ತಿಳಿದು ಬಂದಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ನೌಕಾನೆಲೆ ಸಿಬ್ಬಂದಿಗಳು ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ. ಯುದ್ದ ನೌಕೆಗೆ ಹೆಚ್ಚಿನ ಹಾನಿಯಾಗದಂತೆ ತಡೆದಿದ್ದಾರೆ.
ತೊಂದರೆಗಿಡಾದ ಕಂಪಾರ್ಟ್ಮೆಂಟ್ ನಲ್ಲಿ ಬೆಂಕಿ ನಿಂದಿಸುವ ಕಾರ್ಯದ ಮುಂದಾಳುತ್ವವನ್ನು ಶೌರ್ಯದಿಂದ ನಿಭಾಯಿಸಿದ ಲೆವ್ತೆನಂಟ್ ಕಮಾಂಡರ್ ಡಿಎಸ ಚೌಹಾನ್ ಬೆಂಕಿ ಮತ್ತು ಹೊಗೆಯಿಂದ ಅಸ್ವಸ್ತರಾಗಿದ್ದರು. ತಕ್ಷಣ ಅವರನ್ನು ಕಾರವಾರದ ನೌಕಾನೆಲೆಯ ಐ.ಏನ್.ಎಚ್.ಎಸ.ಪತಂಜಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಘಟನೆಯಲ್ಲಿ ಕೆಲ ಸಿಬ್ಬಂದಿಗೆ ಸುಟ್ಟಗಾಯಗಳಾಗಿದೆ ಎನ್ನಲಾಗಿದೆ.
ಬೆಂಕಿ ಅವಘಡಕ್ಕೆ ಕಾರಣವನ್ನು ಪತ್ತೆಹಚ್ಚಲು ಬೋರ್ಡ್ ಆಫ್ ಎನ್ಕ್ವೈರಿ ಯನ್ನು ರಚಿಸಲು ಆದೇಶಿಸಲಾಗಿದೆ.