ಧಾರುಣ ಘಟನೆ: ತುಂಡಾದ ವಿದ್ಯುತ್ ತಂತಿಗೆ ಸಹೋದರರಿಬ್ಬರ ಬಲಿ! | Janata news
ರಾಯಚೂರು : ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಸಹೋದರರಿಬ್ಬರು ಮೃತಪಟ್ಟಿರುವ ಧಾರುಣ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಜರುಗಿದೆ.
ಮೃತ ದುರ್ದೈವಿಗಳನ್ನು ಹುಸೇನ್ ಭಾಷಾ(36) ಹಾಗೂ ಹಸನ್ (34) ಎಂದು ಗುರುತಿಸಲಾಗಿದೆ. ಗಾಳಿ ಮಳೆಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ದುರಸ್ತಿಗೊಳಿಸುವ ಪ್ರಯತ್ನದಲ್ಲಿದ್ದಾಗ ಈ ಅವಗಢ ಸಂಭವಿಸಿದೆ.
ರಾಯಚೂರಿನ ಸುತ್ತ ಮುತ್ತಲ ಭಾಗದಲ್ಲಿ ನಿನ್ನೆ ಸಂಜೆ ಆರಂಭವಾದ ವಿಪರೀತ ಮಳೆ ಹಾಗೂ ಗಾಳಿ ಬೀಸಿದ್ದರ ಪರಿಣಾಮ ಮನೆಯ ಎದುರಿನ ವಿದ್ಯುತ್ ತಂತಿಗಳು ನೆಲಕ್ಕುರುಳಿದ್ದವು. ಇದನ್ನು ಸರಿಪಡಿಸಲು ಹೋಗಿದ್ದ ಹುಸೇನ್ ವಿದ್ಯುತ್ ಶಾಕ್ಗೆ ಒಳಗಾಗಿದ್ದಾರೆ. ಅಪಘಾತಕ್ಕೀಡಾದ ಅಣ್ಣನ ರಕ್ಷಣೆಗೆ ಹೋಗಿ ತಮ್ಮನ್ನೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಿಂಧನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಘಾತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.