ಸುಮಲತಾ ತುಲಾಭಾರ! ಎಲ್ಲಿ ಗೊತ್ತಾ? | Janata news
ಧಾರವಾಡ : ಧಾರವಾಡದಲ್ಲಿನ ಪುರಾಣ ಪ್ರಸಿದ್ಧ ನುಗ್ಗಿಕೆರಿ ಆಂಜನೇಯ ದೇವಸ್ಥಾನದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮತ್ತು ಅಭಿಷೇಕ್ ಅವರ ತುಲಾಭಾರ ಸೇವೆ ಶನಿವಾರ ನೆರವೇರಿತು.
ತುಲಾಭಾರದ ನಂತರ ಮಾತನಾಡಿದ ಅವರು ಏಳು ವರ್ಷಗಳ ಹಿಂದೆ ಹುಬ್ಬಳ್ಳಿ ಧಾರವಾಡಕ್ಕೆ ಬಂದಿದ್ದೆ. ಈಗ ಮತ್ತೆ ಬರುವ ಅವಕಾಶ ಸಿಕ್ಕಿದೆ ಎಂದರು. ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳೇ ಈ ತುಲಾಭಾರ ಏರ್ಪಡಿಸಿದ್ದಾರೆ. ಈ ತುಲಾಭಾರದ ಬಗ್ಗೆ ನಮಗೆ ಗೊತ್ತೇ ಇಲ್ಲ. ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು. ಅಂಬರೀಷ್ ಅಭಿಮಾನಿ ಉದ್ಯಮಿ ನಾರಾಯಣ ಕಲಾಲ್ ಅವರು ಲೋಕಸಭಾ ಚುನಾವಣೆ ಮತ್ತು ಅಮರ್ ಚಿತ್ರದ ಗೆಲುವಿಗಾಗಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ತುಲಾಭಾರ ಸೇವೆಯಾಗಿದೆ ಎಂದರು.
ಸುಮಲತಾ ಅವರಿಗೆ 75 ಕೆ.ಜಿ ಸಕ್ಕರೆ ಮತ್ತು 15 ಕೆ.ಜಿ ತುಪ್ಪದಿಂದ ತುಲಾಭಾರವಾದರೆ, ಅಭಿಷೇಕ್ಗೆ 100 ಕೆ,ಜಿ ಸಕ್ಕರೆ ಹಾಗೂ 15 ಕೆ.ಜಿ ತುಪ್ಪದಲ್ಲಿ ತುಲಾಭಾರ ನೇರವೇರಿತು. ಈ ಸಂದರ್ಭದಲ್ಲಿ ನಟ ದೊಡ್ಡಣ್ಣ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಮತ್ತು ನಾಗಶೇಖರ್ ಇದ್ದರು.