ನೀವು ಸಿಎಂ ಅಲ್ಲ ಅಂದಿದ್ದರೆ ನಾಯಿ ಕೂಡ ಮೂಸುತ್ತಿರಲಿಲ್ಲ: ಎಚ್ಡಿಕೆಗೆ ಈಶ್ವರಪ್ಪ ಟಾಂಗ್ | Janata news
ಬೆಂಗಳೂರು : ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವ ಕಾರಣಕ್ಕೆ ಜನ ಅವರ ಬಳಿ ಕಷ್ಟ ಹೇಳುವುದಕ್ಕೆ ಹೋಗಿರುವುದು. ಮೋದಿಗೆ ವೋಟ್ ಹಾಕ್ತೀರಿ, ಕೆಲಸ ಕೇಳೋಕ್ಕೆ ಮಾತ್ರ ನನ ಹತ್ತಿರ ಬರ್ತಿರಿ ಅನ್ನೋದಾದ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ. ರಾಜೀನಾಮೆ ನೀಡಿದರೆ, ರಸ್ತೆಯಲ್ಲಿ ಹೋಗೋ ದಾಸಯ್ಯನೂ ನಮ್ಮ ಹತ್ರ ಬರಲ್ಲ. ಅಷ್ಟೆಯಾಕೆ ಒಂದು ನಾಯಿ ಕೂಡ ಮೂಸಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಸಂಪೂರ್ಣ ಸ್ವಾತಂತ್ರ್ಯವಿದ್ದು, ಯಾರು ಯಾರಿಗೆ ಬೇಕಾದರು ಮತ ಹಾಕುತ್ತಾರೆ. ಅವರಿಗೆ ಯಾರು ಬೇಕೋ ಆ ಅಭ್ಯರ್ಥಿಗೆ ವೋಟು ಹಾಕುವ ಪೂರ್ಣ ಸ್ವಾತಂತ್ರ್ಯ ಇದೆ. ಜನರು ವೋಟು ಹಾಕಿದ್ದಕ್ಕೆ ನೀವು ಮುಖ್ಯಮಂತ್ರಿ ಆಗಿದ್ದೀರಿ. ರಾಜ್ಯದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಸರಿಯಿಲ್ಲ ಎಂದು ಜನ ಮೋದಿಗೆ ಮತ ನೀಡಿದ್ದಾರೆ.
ನೀವು ಜನರು ಕಷ್ಟವನ್ನು ಕೇಳಲು ಗ್ರಾಮ ವಾಸ್ತವ್ಯ ಮಾಡುತ್ತಿರುವುದು. ಈಗ ರೀತಿ ನಡೆದುಕೊಳ್ಳುವುದು ಸರಿಯಿಲ್ಲ. ಹೀಗಾಗಿ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ. ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ರಸ್ತೆಯಲ್ಲಿ ಹೋಗುವ ದಾಸಯ್ಯನೂ ಬರಲ್ಲ. ಒಂದು ನಾಯಿನೂ ಕೂಡ ನಿಮ್ಮ ಬಳಿ ಬಂದು ಮೂಸಲ್ಲ. ನೀವು ಮುಖ್ಯಮಂತ್ರಿ ಅನ್ನೋ ಕಾರಣಕ್ಕೆ ಜನ ನಿಮ್ಮ ಬಳಿ ಬರುತ್ತಾರೆ ಎಂದು ಸಿಎಂ ಬಗ್ಗೆ ಅವಹೇಳಕಾರಿ ಹೇಳಿಕೆ ಕೊಟ್ಟಿದ್ದಾರೆ.