ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕುಮಾರ್! | Janata news
ಬೆಂಗಳೂರು : ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ಅವರು ಇಂದು ರಾಜೀನಾಮೆಯನ್ನು ಘೋಷಣೆ ಮಾಡಿದ್ದಾರೆ.
ಸ್ಪೀಕರ್ ಜವಾಬ್ದಾರಿಯಿಂದ ಬಿಡುಗಡೆಗೊಳ್ಳಬೇಕೆಂದು ಬಯಸಿದ್ದೇನೆ. ಕಳೆದ 14 ತಿಂಗಳ ಕಾಲ ಈ ಸ್ಥಾನವನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದೇನೆ. ನಿಮಗೆಲ್ಲರಿಗೂ ವಂದಿಸಿ. ಈಕ್ಷಣದಿಂದ ರಾಜೀನಾಮೆ ಪತ್ರ ನೀಡುತ್ತಿದ್ದೇನೆ ಎಂದು ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಸೋಮವಾರ ಘೋಷಿಸಿದ್ದಾರೆ.
ಇನ್ನು ನನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿ ನಾನು ಕೆಲಸ ಮಾಡಿದ್ದೇನೆ, ನನ್ನ ವಿರೋಧ ಮಾಡುವವರನ್ನು ನಾನು ಗೌರವಿಸುವೆ, ನನ್ನ ಗೌರವಿಸುವವರನ್ನು ನಾನು ಗೌರವಿಸುವೆ ಎರಡನ್ನು ನಾನು ಸಮಾನವಾಗಿ ಗೌರವಿಸುವೆ ಅಂತ ಹೇಳಿದರು. ಈ ದೇಶದ ಭ್ರಷ್ಟಾಚಾದರ ಮೂಲ ಚುನಾವಣೆಯಾಗಿದ್ದವೆ ಅಂತ ಬೇಸರ ವ್ಯಕ್ತಪಡಿಸಿದರು. ಚುನಾವಣೆಗಳು ಸುಧಾರಣೆಯಾಗದ ಹೊರತು ಭ್ರಷ್ಟಾಚಾರ ಸುಧಾರಿಸುವುದಿಲ್ಲ ಅಂತ ಹೇಳಿದರು. ಲೋಕಾಯುಕ್ತ ಕಾನೂನು ಸಹ ಸುಧಾರಣೆಯಾಗಬೇಕು ಅಂತ ಹೇಳಿದರು. ರಮೇಶ್ ಕುಮಾರ್ ತಮ್ಮ ಪೀಠದಿಂದ ಹೋಗುವ ಮುನ್ನ ಉಪಸಭಾಪತಿಗೆ ರಾಜೀನಾಮೆಯನ್ನು ಸಲ್ಲಿಸಿ, ಸದನದಿಂದ ಹೊರ ನಡೆದರು. ಇದೇ ವೇಳೆ ಸದವನ್ನು ಮುಂದುವರಿಸಿದ ಉಪಸಭಾಪತಿ ಸದನವನ್ನು ಇಂದು ಸಂಜೆ 5 ಗಂಟೆಗೆ ಮುಂದೂಡಿದರು.