ಕೆಪಿಸಿಸಿಯಿಂದ ಪ್ರವಾಹ ಪರಿಹಾರ ನಿಧಿಗಾಗಿ ₹41.5 ಲಕ್ಷ ಮೌಲ್ಯದ ಚೆಕ್ ಹಸ್ತಾಂತರ | Janata news
ಬೆಂಗಳೂರು : ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಸ್ಥಿತಿಯನ್ನು ಎದುರಿಸಲು ಪರಿಹಾರ ನಿಧಿಯಾಗಿ ಕೆಪಿಸಿಸಿ ವತಿಯಿಂದ ₹41.5 ಲಕ್ಷ ಮೌಲ್ಯದ ಚೆಕ್ ನ್ನು ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಿಜಯಭಾಸ್ಕರ್ ಅವರಿಗೆ ಹಸ್ತಾಂತರಿಸಲಾಯಿತು, ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ.
ಈ ಕುರಿತು ನಿಧಿ ಸಂಗ್ರಹಣೆಗಾಗಿ ಇಂದು ಬೆಳಿಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅವರು, ಬಹುತೇಕ ಜಿಲ್ಲೆಗಳಲ್ಲಿ ನೆರೆಯಿಂದಾಗಿ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಪ್ರವಾಹದಿಂದಾಗಿ ಆಲ್ಲಿಯ ಜನರು ಸಂಕಷ್ಟದಲ್ಲಿದ್ದಾರೆ. ಕೆಪಿಸಿಸಿ ಪರಿಹಾರ ನಿಧಿಗೆ ಎಲ್ಲರೂ ಸಾಧ್ಯವಾದಷ್ಟು ಹಣಕಾಸಿನ ನೆರವನ್ನು ನೀಡಬೇಕು. ಹಣಕಾಸಿನ ಸಹಕಾರ ನೀಡುವ ಮೂಲಕ ಸಂತ್ರಸ್ತರಿಗೆ ನೆರವಾಗುವಂತೆ, ಕಾಂಗ್ರೆಸ್ ಸದಸ್ಯರಲ್ಲಿ ಮನವಿ ಮಾಡಿದ್ದರು.
On behalf of @INCKarnataka, Flood relief cheque amounting to ₹41.5 lakhs handed to over Sri Vijayabhaskar, Chief Secretary, Govt Of Karnataka.
— Dinesh Gundu Rao / ದಿನೇಶ್ ಗುಂಡೂರಾವ್ (@dineshgrao) August 9, 2019
@INCIndia always stands by the people in need.#KarnatakaFloods pic.twitter.com/WAhQHZH6ad