ಅತಿವೃಷ್ಟಿ ಸಂತ್ರಸ್ತರ ನೆರವಿಗೆ ಕೈಜೋಡಿಸಲು ರಾಜ್ಯ ಸರ್ಕಾರ ಮನವಿ | Janata news
ಬೆಂಗಳೂರು : ರಾಜ್ಯದ ಬೆಳಗಾವಿ, ಉತ್ತರ ಕನ್ನಡ, ಕೊಡಗು ಜಿಲ್ಲೆ ಸೇರಿದಂತೆ 15ಜಿಲ್ಲೆಗಳಲ್ಲಿ ಅತಿವೃಷ್ಟಿ(ಪ್ರಕೃತಿ ವಿಕೋಪ)ದಲ್ಲಿ ನೊಂದ ಸಂತ್ರಸ್ತರ ನೆರವಿಗೆ ಸಹಾಯ ಹಸ್ತ ಚಾಚಲು ಸರ್ಕಾರದೊಂದಿಗೆ ಕೈಜೋಡಿಸುವಂತೆ ಸಾರ್ವಜನಿಕರಿಗೆ ಕರ್ನಾಟಕ ಸರ್ಕಾರ ಮನವಿ ಮಾಡಿದೆ.
ಈ ರೀತಿ ಸಲ್ಲಿಸುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80ಜಿ(2)ರ ಅಡಿ ತೆರಿಗೆ ವಿನಾಯಿತಿ ಇರುತ್ತದೆ, ಅದ್ಯ ತೆರಿಗೆ ವಿನಾಯಿತಿ ಪಡೆಯಲು ಪಾನ್ ನಂಬರ್ : AAAGC1692P ಅಥವಾ GGGGG0000G ಅನ್ನು ಬಳಸಬಹುದು ಎಂದು ಹೇಳಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿಯವರ ಕಾರ್ಯದರ್ಶಿಯವರು, ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸ್ವಪ್ರೇರಣೆಯಿಂದ, ಚೀಫ್ ಮಿನಿಸ್ಟರ್ ರಿಲೀಫ್ ಫಂಡ್ ನ್ಯಾಚುರಲ್ ಕ್ಯಾಲಮಿಟಿ ಖಾತೆಗೆ ನೆರವಾಗಿ ಹಣ ವರ್ಗಾಯಿಸಬಹುದು ಅಥವಾ ಚೆಕ್/ಡಿಡಿ ಗಳ ಮೂಲಕವೂ ದೇಣಿಗೆಯನ್ನು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಖಾತೆಯ ಹೆಸರು : Chief Minister Relief Fund Natural Calamity
ಬ್ಯಾಂಕ್ ಹೆಸರು : State Bank of India
ಶಾಖೆ : Vidhana Soudha branch
ಖಾತೆ ಸಂಖ್ಯೆ : 37887098605
ಐ.ಎಫ್.ಎಸ್.ಸಿ. ಸಂಖ್ಯೆ : SBIN0040277
ಎಂ.ಐ.ಸಿ.ಆರ್. ಸಂಖ್ಯೆ : 560002419
ಚೆಕ್ ಕಳುಹಿಸಬೇಕಾದ ವಿಳಾಸ : ನ. 235A, 2ನೇ ಮಹಡಿ, ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆ, ವಿಧಾನ ಸೌಧ, ಬೆಂಗಳೂರು - 1
Request all citizens to lend a helping hand to the people in distress due to floods in the State by contributing generously to the Chief Minister's Relief Fund - Natural Calamity #CMRF #KarnatakaFloods #NorthKarnatakaFloods pic.twitter.com/KtMSfBaf2y
— CM of Karnataka (@CMofKarnataka) August 8, 2019