ಐಎಂಎ ಹಗರಣ: ಹಣವನ್ನು ಸಂಗ್ರಹಿಸಲು ಮನ್ಸೂರ್ ಖಾನ್ ನಿರ್ಮಿಸಿದ್ದ ಬಂಕರ್ ಪತ್ತೆ | Janata news
ಕೋಲಾರ: : ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾದ ಮನ್ಸೂರ್ ಅಲಿ ಖಾನ್ ತಾನು ಜನರಿಂದ ಸಂಗ್ರಹ ಮಾಡುತ್ತಿದ್ದ ಹಣವನ್ನು ಕೂಡಿಡಲು ಬಂಕರ್ ಅನ್ನು ಮಾಡಿದ್ದ ಎನ್ನುವ ಆಘಾತಕಾರಿ ಮಾಹಿತಿ ಹೊರ ಬಿದಿದ್ದೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಮನ್ಸೂರ್ ಖಾನ್ ಆಪ್ತ ಖಮರುಲ್ ವಿಚಾರಣೆ ವೇಳೆ ಹಣ ಮತ್ತು ಚಿನ್ನವನ್ನು ಸಂಗ್ರಹಿಸಿಲು ಬಂಕರ್ ನಿರ್ಮಿಸಿರುವುದಾಗಿ ತಿಳಿಸಿದ್ದ. ಅದರಂತೆ ಖಮರುಲ್ಲಾ ನೀಡಿದ ಮಾಹಿತಿಯಂತೆ ಕೋಲಾರ ಮಾಲೂರು ಭೈರಪ್ಪನಹಳ್ಳಿ ಉಸ್ಮಾನ್ ಫಾರಂ ಹೌಸ್ ಮೇಲೆ ದಾಳಿ ನಡೆಸಿದ ವೇಳೆಯಲ್ಲಿ ಮನ್ಸೂರ್ ಅಲಿ ಖಾನ್ ಹಣವನ್ನು ಕೂಡಿಡಲು ಮಾಡಿದ್ದ ಬಂಕರ್ ಅನ್ನು ಜಿಲ್ಲಾಡಳಿತ ಹಾಗೂ ಎಸ್ಐಟಿ ತಂಡ ವಶಪಡಿಸಿಕೊಂಡಿದೆ.
ಮನ್ಸೂರ್ ಖಾನ್ ಮೂರು ವರ್ಷಗಳ ಹಿಂದೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ನಾರಾಯಣಪುರ ಗೇಟ್ ಬಳಿ ಉಸ್ಮಾನ್ ಫಾರ್ಮ್ ಹೌಸ್ನಲ್ಲಿ ಬಂಕರ್ ನಿರ್ಮಿಸಿದ್ದ. ಈ ಬಂಕರ್ನಲ್ಲಿ ಸಾವಿರಾರು ಕೋಟಿ ರೂ. ಹಣ ಮತ್ತು ಚಿನ್ನವನ್ನು ಸಂಗ್ರಹಿಸಿಡಬಹುದಾಗಿದೆ. ಈ ಫಾರ್ಮ್ಹೌಸ್ನಲ್ಲಿ ಗಣ್ಯರು ಉಳಿದುಕೊಳ್ಳಲು ಬೇಕಾದ ಐಷಾರಾಮಿ ಸವಲತ್ತುಗಳನ್ನು ಒದಗಿಸಲಾಗಿದೆ ಎನ್ನಲಾಗಿದೆ.