ನದಿಯಲ್ಲಿ ಕಾಲು ಜಾರಿ ಬಿದ್ದ ಯುವಕ, ಕಾಪಾಡಲು ಹೋದ ವೃದ್ಧ; ಇಬ್ಬರೂ ನೀರುಪಾಲು | Janata news
ಹಾವೇರಿ : ಹಾವೇರಿ ತಾಲೂಕಿನ ಹಂದಿಗನೂರ ಗ್ರಾಮದ ಪರಮೇಶಪ್ಪ ಕಮ್ಮಾರ (62) ಮತ್ತು ಪ್ರಶಾಂತ ಕೊಂಚಿಗೇರಿ (18) ಎಂಬ ಯುವಕ ಮೈ ತುಂಬಿ ಹರಿಯುತ್ತಿದ್ದ ವರದಾ ನದಿಯ ಪಾಲಾಗಿದ್ದಾರೆ.
ಘಟನೆ -
ಎತ್ತಿನ ಮೈ ತೊಳೆಯಲು ಮಾವನ ಜೊತೆ ಪ್ರಶಾಂತ್ ವರದಾ ನದಿಗೆ ಹೋಗಿದ್ದ. ಆಗ ಅಚಾನಕ್ ಆಗಿ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಅದೇ ನದಿಯಲ್ಲಿ ಸ್ನಾನ ಮಾಡಿತ್ತಿದ್ದ ಪರಮೇಶಪ್ಪ ಕಮ್ಮಾರ (62) ಪ್ರಶಾಂತ್ ನದಿಯಲ್ಲಿ ಮುಳುಗುತ್ತಿರುವುದನ್ನು ನೋಡಿ ಅವನನ್ನು ರಕ್ಷಿಸಲು ನದಿಗೆ ಇಳಿದು ದುರದೃಷ್ಟವಶಾತ್ ಅವರೂ ನೀರುಪಾಲಾಗಿದ್ದಾರೆ. ಇಬ್ಬರು ಸಹ ನದಿ ನೀರಿನ ರಭಸಕ್ಕೆ ಇಬ್ಬರು ಕೊಚ್ಚಿ ಹೋಗಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಪರಮೇಶಪ್ಪ ಕಮ್ಮಾರ ಅವರ ಮೃತದೇಹ ಸಿಕ್ಕಿದ್ದು, ಪ್ರಶಾಂತನ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರಿದಿದೆ. ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಈ ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.