ರಮೇಶ್ ಅವಕಾಶವಾದಿ ರಾಜಕಾರಣಿ: ಸತೀಶ್ ಜಾರಕಿಹೊಳಿ | Janata news
ಬೆಳಗಾವಿ : ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಕುತಂತ್ರಕ್ಕೆ ಬೆಳಗಾವಿ ಜಿಲ್ಲೆ ಬಲಿಯಾಗಿದೆ. ಅವನೊಬ್ಬ ಅವಕಾಶವಾದಿ ರಾಜಕಾರಣಿ ಎಂದು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಟೀಕಿಸಿದರು.
ಸುದ್ದಿಗಾರೊಂದಿಗೆ ಜತೆ ಮಾತನಾಡಿದ ಅವರು, ರಮೇಶ್ನನ್ನು ಸೋಲಿಸಬೇಕೆಂದು ಮೊದಲಿನಿಂದಲೂ ಪ್ರಚಾರ ಮಾಡುತ್ತಿದ್ದೇವೆ. ರಮೇಶ್ನನ್ನು ಸೋಲಿಸಿ ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತ ಮಾಡಲಾಗುವುದು.
ಲಖನ್ಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ. ಎಚ್.ವಿಶ್ವನಾಥ್ ನಮ್ಮ ಗುರು ಎನ್ನುವ ರಮೇಶ್, ಮೊದಲು ಎಸ್.ಎಂ. ಕೃಷ್ಣ, ಸೋನಿಯಾ ಗಾಂಧಿ ಹೀಗೆ ನಲವತ್ತು ಜನರ ಹೆಸರು ಹೇಳುತ್ತಿದ್ದ. ಅವನೊಬ್ಬ ಅವಕಾಶವಾದಿ.
ಜನರು ನಮ್ಮ ಪರವಾಗಿ ಇದ್ದಾರೆ. ರಮೇಶ್ ನಡೆಸುವ ಸಮಾವೇಶಕ್ಕೆ ಒಂದು ಲಕ್ಷ ಜನರನ್ನು ಸೇರಿಸಲು ನಾಲ್ಕು ಜಿಲ್ಲೆಯ ಜನರನ್ನು ಕರೆ ತರುತ್ತಾರೆ. ಗೆಲುವೊಂದೇ ನಮ್ಮ ಗುರಿ ಎಂದರು.
ಹೀಗೆ ಸತೀಶ್ ಜಾರಕಿಹೊಳಿ ತಮ್ಮ ಸಹೋದರ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವನೊಬ್ಬ ಅವಕಾಶವಾದಿ ರಾಜಕಾರಣಿ ಎಂದು ವ್ಯಂಗ್ಯವಾಡಿದ್ದಾರೆ.