ಮುಖ್ಯಮಂತ್ರಿ ಬಿಎಸ್ವೈ ಇದರ ಹೊಣೆ ಹೊರಬೇಕು: ಕುಮಾರಸ್ವಾಮಿ | Janata news
ಮಂಗಳೂರು : ಮಂಗಳೂರಿನ ಪ್ರತಿಭಟನೆ ವೇಳೆ, ಫೈರ್ ಮಾಡಿದೆವು, ಒಂದೂ ಗುಂಡೂ ಬೀಳಲಿಲ್ವಾ, ಒಬ್ಬರೂ ಸಾಯಲಿಲ್ವಾ? ಎಂಬ ಪೊಲೀಸ್ ಅಧಿಕಾರಿಯ ಧ್ವನಿ ಸರ್ಕಾರವೇ ಸ್ವತಃ ಮುಂದೆ ನಿಂತು ಹೋರಾಟಗಾರರನ್ನು ಕೊಲ್ಲಿಸಿದೆ ಎಂಬ ಆರೋಪಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಫೈರ್ ಮಾಡಿದೆವು, ಒಂದು ಗುಂಡೂ ಬೀಳ್ಲಿಲ್ವಲ, ಒಬ್ಬರೂ ಸಾಯಲಿಲ್ವಲ ಇದು ಮಂಗಳೂರು ಪ್ರತಿಭಟನೆ ವೇಳೆ ಹೋರಾಟಗಾರರನ್ನು ಕೊಂದ ಪೊಲೀಸ್ ಅಧಿಕಾರಿಯೊಬ್ಬರ ಮಾತು. ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿ ನಿಂತಿದೆ. ಇದರ ಹೊಣೆಯನ್ನು ಮುಖ್ಯಮಂತ್ರಿ ಹೊರಬೇಕು ಎಂದಿದ್ದಾರೆ.
"ಫೈರ್ ಮಾಡಿದೆವು, ಒಂದು ಗುಂಡೂ ಬೀಳ್ಲಿಲ್ವಲ, ಒಬ್ಬರೂ ಸಾಯಲಿಲ್ವಲ" ಇದು ಮಂಗಳೂರು ಪ್ರತಿಭಟನೆ ವೇಳೆ ಹೋರಾಟಗಾರರನ್ನು ಕೊಂದ ಪೊಲೀಸ್ ಅಧಿಕಾರಿಯೊಬ್ಬರ ಮಾತು. ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿ ನಿಂತಿದೆ. ಇದರ ಹೊಣೆಯನ್ನು ಮುಖ್ಯಮಂತ್ರಿ @BSYBJP ಹೊರಬೇಕು.#NRC_CAA
— H D Kumaraswamy (@hd_kumaraswamy) December 20, 2019
(1/4) pic.twitter.com/3p8QN7rmL0