ತಾಳಗುಪ್ಪಾ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಸರ್ವೇಗೆ ರೂ.75 ಲಕ್ಷ ಮಂಜೂರು | Janata news
ಶಿರಸಿ : ರೇಲ್ವೆ ಮಾರ್ಗದ ಕುರಿತು ಉತ್ತರ ಕನ್ನಡ ಜಿಲ್ಲೆಯ ವಾಣಿಜ್ಯ ನಗರಿ ಶಿರಸಿ ಜನರ ಬಹುವರ್ಷದ ಕನಸು ನನಸಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದ್ದು, ಭಾರತೀಯ ರೇಲ್ವೆ ಸಚಿವಾಲಯ ಈ ಕುರಿತು ಸರ್ವೇ ನಡೆಸಲು ಹಣ ಮಂಜೂರು ಮಾಡಿದೆ.
ಶಿರಸಿ ಶಾಸಕ ಹಾಗೂ ಸಭಾಪತಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಾಳಗುಪ್ಪಾ - ಸಿದ್ದಾಪುರ - ಶಿರಸಿ - ಮುಂಡಗೋಡ - ತಡಸ್ - ಹುಬ್ಬಳ್ಳಿ ರೈಲು ಮಾರ್ಗ ಮಂಜೂರಿಗೊಳಿಸುವ ಕುರಿತು ಈ ಹಿಂದೆ ಕೇಂದ್ರ ರೈಲ್ವೇ ಸಚಿವರಾದ ಸುರೇಶ ಅಂಗಡಿಯವರೊಂದಿಗೆ ಚರ್ಚಿಸಿ, ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಗೆ ರಾಜ್ಯದವರೇ ಆದ ಸುರೇಶ ಅಂಗಡಿಯವರಿಂದ ಉತ್ತಮ ಸ್ಪಂದನೆ ದೊರತಿದೆ.
ಈ ಕುರಿತು ಆದೇಶ ಹೊರಡಿಸಿದ ರೇಲ್ವೆ ಸಚಿವಾಲಯ ಈ ಮಾರ್ಗದ ಪ್ರಾಥಮಿಕ ಎಂಜಿನಿಯರಿಂಗ್ ಮತ್ತು ಸಂಚಾರ ಸಮೀಕ್ಷೆ(ಪಿಇಟಿ ಸರ್ವೇ) ನಡೆಸಲು ರೂ.75 ಲಕ್ಷ ಮಂಜೂರು ಮಾಡಿದೆ. ಹಾಗೂ ಅತಿ ಶೀಘ್ರದಲ್ಲಿ ಸರ್ವೇ ಕಾರ್ಯ ಆರಂಭಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ.