ಪ್ರೀತಿಸಿದ ಹುಡುಗಿ ಪೋಷಕರಿಂದ ಬೆದರಿಕೆ: ಮನನೊಂದ ಯುವಕ ಆತ್ಮಹತ್ಯೆ? | Janata news
ಮಂಡ್ಯ : ಪ್ರೀತಿಸಿದ ಹುಡುಗಿ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದರ್ಶನ್ ಹೆಚ್(25) ಆತ್ಮಹತ್ಯೆಗೆ ಶರಣಾದ ಯುವಕ. ಮಂಡ್ಯ ಮೂಲದ ದರ್ಶನ್ ನಗರದಲ್ಲಿ ಕೆಪಿಟಿಸಿಎಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ.
ಆದರೆ ಗ್ರಾಮದ ಯುವತಿಯೋರ್ವಳನ್ನು ಚಿಕ್ಕಂದಿನಿಂದಲೂ ಪ್ರೀತಿ ಮಾಡುತ್ತಿದ್ದ. ಈ ವಿಷಯವು ಹುಡುಗಿಯ ಮನೆಯವರಿಗೆ ಗೊತ್ತಾಗುತ್ತಿದ್ದಂತೆ, ಯುವತಿಗೆ ಬೇರೊಬ್ಬನೊಂದಿಗೆ ಮನೆಯವರು ನಿಶ್ಚಿತಾರ್ಥ ಆಗಿತ್ತು. ಇದರಿಂದ ಮನನೊಂದಿದ್ದ. ನೀನು ನಿಶ್ಚಿತಾರ್ಥಕ್ಕೆ ಹೋಗಿದ್ದೆಯಾ ಎಂದು ತನ್ನ ಅಮ್ಮನಿಗೂ ಫೋನ್ ಮಾಡಿ ಕೇಳಿದ್ದ ಎನ್ನಲಾಗಿದೆ.
ಈ ಹಿನ್ನೆಲೆ ಯುವತಿ ಪೋಷಕರು ಯುವಕನಿಗೆ ಧಮ್ಕಿ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ವಿಚಾರವನ್ನು ದರ್ಶನ್ ತನ್ನ ಮನೆಯವರ ಬಳಿ ಹೇಳಿಕೊಂಡಿದ್ದನಂತೆ. ಇದೆಲ್ಲದರಿಂದ ಮನನೊಂದು ಬೆಂಗಳೂರಿನ ಕೊಠಡಿಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನನ್ನ ಸಾವಿಗೆ ನೀನೇ ಕಾರಣ ಎಂದು ಪ್ರಿಯತಮೆಯ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದರ್ಶನ್ ಪಾಲಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಯುವತಿ ಸೇರಿದಂತೆ ಆಕೆಯ ಪೋಷಕರ ಮೇಲೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.