ಒಲಿಂಪಿಕ್ಸ್ಗೆ ಕಂಬಳದ ವೀರ! ಕೇಂದ್ರ ಕ್ರೀಡಾ ಖಾತೆ ಸಚಿವ ಹೇಳಿದ್ದೇನು? | Janata news
ನವದೆಹಲಿ : ವಿಶ್ವದ ಅತ್ಯಂತ ವೇಗದ ಓಟಗಾರ ಉಸೇನ್ ಬೋಲ್ಟ್ ನನ್ನೇ ಮೀರಿಸಿದ ಕರಾವಳಿಯ ಕುವರ ಶ್ರೀನಿವಾಸ ಗೌಡ ಇಂದು ರಾಷ್ಟ್ರಾದ್ಯಂತ ಮಿಂಚುತ್ತಿದ್ದಾರೆ.
ಕಂಬಳದ ಗೆದ್ದೆಯಲ್ಲಿ ಕೋಣಗಳ ಲಗಾಮು ಹಿಡಿದು ಜಸ್ಟ್ 9.55 ಸೆಕೆಂಡ್ನಲ್ಲಿ ನೂರು ಮೀಟರ್ ದೂರವನ್ನು ಕ್ರಮಿಸಿದ್ದರು. ಅವರ ಈ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಮೇಲಾಗಿ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಆರಂಭಿಸಿ ರಾಷ್ಟ್ರ ರಾಜಧಾನಿಯವರೆಗೂ ನ್ಯೂಸ್ ತಲುಪಿತ್ತು.
ಕಂಬಳ ಕ್ರೀಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಶ್ರೀನಿವಾಸ ಗೌಡ ಅವರು 100 ಮೀಟರ್ ಓಟವನ್ನು 9.58 ಸೆಕೆಂಡ್ನಲ್ಲಿ ಮುಗಿಸಿದ್ದಾರೆ. 142.5 ಮೀಟರ್ ಅನ್ನು 13.62 ಸೆಕೆಂಡ್ ನಲ್ಲಿ ಕ್ರಮಿಸಿದ್ದಾರೆ. ಈ ಲೆಕ್ಕಾಚಾರವನ್ನ100 ಮೀಟರ್ಗೆ ಇಳಿಸಿದರೆ ಉಸೇನ್ ಬೋಲ್ಟ್ ಗಿಂತಲೂ 3 ಸೆಕೆಂಡ್ ವೇಗವಾಗಿ ಅವರು ಕ್ರಮಿಸಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ.
ಈ ನಡುವೆ ಕಂಬಳ ಕ್ರೀಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಶ್ರೀನಿವಾಸ ಗೌಡ ಅವರ ಮಾಡಿದ ಸಾಧನೆಯನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮೆಚ್ಚಿಕೊಂಡು ಟ್ವಿಟ್ ಮಾಡಿದ್ದು, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ತರಬೇತುದಾರರು ಶ್ರೀನಿವಾಸ್ ಗೌಡ ಅವರ ಪರೀಕ್ಷೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಒಲಿಂಪಿಕ್ಸ್ನಲ್ಲಿನ ಮಾನದಂಡಗಳ ಬಗ್ಗೆ ಜನಸಾಮಾನ್ಯರಲ್ಲಿ ಜ್ಞಾನದ ಕೊರತೆಯಿದೆ. ವಿಶೇಷವಾಗಿ ಅಥ್ಲೆಟಿಕ್ಸ್ನಲ್ಲಿ ಭಾರತದ ಯಾವುದೇ ಪ್ರತಿಭೆ ಮೂಲೆಗುಂಪು ಆಗಲು ನಾವು ಬಿಡುವುದಿಲ್ಲ ಅಂತ ಹೇಳಿಕೊಂಡಿದ್ದಾರೆ.
ಈ ನಡುವೆ ಮಹೀಂದ್ರ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶ್ರೀನಿವಾಸ್ ಗೌಡರ ಸಾಮರ್ಥ್ಯವನ್ನ ಕೊಂಡಾಡಿ ಟ್ವೀಟ್ ಮಾಡಿದ್ದರು. ಈ ಮನುಷ್ಯ ಅಥ್ಲೆಟಿಕ್ಸ್ನಲ್ಲಿ ಅಸಾಧಾರಣ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾನೆ. ಕಿರಣ್ ರಿಜಿಜು ಈತನಿಗೆ 100 ಮೀಟರ್ ಓಟದಲ್ಲಿ ತರಬೇತಿ ಕೊಡಿಸಬೇಕು. ಇಲ್ಲಾ ಕಂಬಳವನ್ನ ಒಲಂಪಿಕ್ ಇವೆಂಟ್ನಲ್ಲಿ ಸೇರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದರು.
I'll call Karnataka's Srinivasa Gowda for trials by top SAI Coaches. There's lack of knowledge in masses about the standards of Olympics especially in athletics where ultimate human strength & endurance are surpassed. I'll ensure that no talents in India is left out untested. https://t.co/ohCLQ1YNK0
— Kiren Rijiju (@KirenRijiju) February 15, 2020